Sunday, March 20, 2011

ನಾಡು ಮರೆತ ನಾಯಕರು-ಭಾಗ 2


ಆ ದಿನಗಳೇ ಹಾಗಿದ್ದವು. ಅವರ ತಲೆಯಲ್ಲಿದ್ದ ವಿಚಾರಗಳೆಂದರೆ ಕೇವಲ ಭಾರತ ಮಾತೆಯ ಬಂಧನ ಮುಕ್ತಿ. ಅದಕ್ಕಾಗಿ ಅವರು ತಮ್ಮ ಪ್ರಾಣವನ್ನು ಲೆಕ್ಕಿಸದೆ, ಬ್ರಿಟಿಷರ ಗುಂಡಿಗೆ ಗುಂಡಿಗೆಯನ್ನೊಡ್ಡಿ ಹುತಾತ್ಮರಾದರು. ಕೇವಲ ಶಾಂತಿಯ ಮಂತ್ರವನ್ನು ಜಪಿಸುತ್ತ, ಬ್ರಿಟಿಷರ ಬೂಟಿನೇಟು ಸಹಿಸುತ್ತ ಬದುಕದೆ, ಸಿಡಿದೆದ್ದರು. ಪರಿಣಾಮ ಬೆತ್ತಲೆ ಸಮಾಜದಲ್ಲಿ ಬಟ್ಟೆ ಹಾಕಿಕೊಳ್ಳುವವನನ್ನು ಮೂರ್ಖ ಎನಿಸಿಕೊಳ್ಳುತ್ತಾನೆ. ಅಂತೆಯೇ ಬ್ರಿಟಿಷರಲ್ಲಿ ಶಾಂತಿಯಿಂದ ತಲೆತಗ್ಗಿಸಿ ಸ್ವಾತಂತ್ರ್ಯದ ಭಿಕ್ಷೆ ಕೇಳುತ್ತಿದ್ದವರು ಇತಿಹಾಸದಲ್ಲಿ ಹಿರೋಗಳಾಗಿ ಮಿಂಚಿದರೆ, ಇದ್ಯಾವುದಕ್ಕೂ ಜಗ್ಗದ ಕ್ರಾಂತಿಕಾರಿಗಳು ಅದೇ ಇತಿಹಾಸದ ಪುಟದಲ್ಲಿಂದು ಖಳನಾಯಕರೆಂದು ಬಿಂಬಿತರಾಗಿ ಕಳೆದು ಹೋಗಿದ್ದಾರೆ. ಕಳೆದು ಹೋದ ಕ್ರಾಂತಿಯ ಕಿಡಿಗಳನ್ನು ಮರಳಿತೋರಿಸುವ ಪ್ರಯತ್ನ ಈ ಲೇಖನದ್ದಾಗಿದೆ.
ಸ್ವತಂತ್ರ್ಯ ಬಾನಿನಲ್ಲಿ ಮಿನುಗಬೇಕಾಗಿದ್ದ ಧೃವತಾರೆಗಳು ಇಂದು ಇತಿಹಾಸದ ಯಾವುದೋ ಮೂಲೆಯಲ್ಲಿ ಮಂಕಾಗಿ ಬಿಟ್ಟಿವೆ. ಅಂತಹ ಪ್ರಜ್ವಲ ತಾರೆಗಳ ಪರಿಚಯ ಈ ಕೆಳಗಿನಂತಿದೆ.
ಸರ್ದಾರ್ ಅಜೀತ್ ಸಿಂಗ್
ಅಪ್ರತಿಮ ದೇಶಭಕ್ತನಾಗಿ ಅತಿ ಚಿಕ್ಕ ವಯಸ್ಸಿನಲ್ಲಿ ನಗುನಗುತ ನೇಣುಗಂಬ ಏರಿದ ಕ್ರಾಂತಿಕಾರಿ ಭಗತ್ಸಿಂಗನ ಚಿಕ್ಕಪ್ಪನೇ ಈ ಸರದಾರ ಅಜಿತ್ಸಿಂಗ್. ಬ್ರಿಟಿಷ್ ಗುಲಾಮಗಿರಿ ವಿರುದ್ಧ ತಿರುಗಿ ಬಿದ್ದ ಧೈರ್ಯವಂತ ವ್ಯಕ್ತಿ. ಲಾಲಾ ಲಜಪತರಾಯರ ನಿಕಟವತರ್ಿಯಾಗಿದ್ದ ಇವರು ಪಂಜಾಬಿನ ಮುಂಚೂಣಿಯ ರೈತ ಹೋರಾಟಗಾರರ ಚಳುವಳಿಗೆ ಮಾರ್ಗದರ್ಶಕರಾಗಿದ್ದರು.
ಪಂಜಾಬಿನ ರೈತರನ್ನು ಬ್ರಿಟಿಷ್ ಸಕರ್ಾರವು ಅತ್ಯಂತ ಹೀನಾಯವಾಗಿ ನಡೆಸಿ ಕೊಳ್ಳುತ್ತಿತ್ತು. ಅದರಲ್ಲೂ ರಾವಿ ಮತ್ತು ಚಿನಾಬ್ ನದಿಗಳ ಮಧ್ಯಪ್ರದೇಶದಲ್ಲಿದ್ದ ನಾಲೆಗಳ ವಲಸೆ ನಗರಗಳಲ್ಲಿ ಮತ್ತು ಲೈಲ್ಪುರದಲ್ಲಿ ನೆಲೆಸಿರುವ ರೈತರಿಗೆ ವಿಧಿಸಿದ್ದ ಅಸಹ್ಯಕರ ಕಾನೂನುಗಳು ಮತ್ತು ಅಧಿಕವಾದ ಕಂದಾಯದಿಂದಾಗಿ ರೋಸಿ ಹೋಗಿದ್ದರು. ಇದರಿಂದ ಲಾಲಾಲಜಪತರಾಯರ ಜೊತೆ ಸೇರಿ ಸದರ್ಾರ ಅಜಿತ್ಸಿಂಗ್ ರೈತ ಚಳುವಳಿ ಆರಂಭಿಸಿದರು.
`ಪಗಡೀ ಸಂಭಾಲ ಜತ್ತ (ಹೇ ಜತ ರೈತನೇ ಎಚ್ಚೆತ್ತು ನಿನ್ನ ರುಮಾಲು ಸಂಬಾಳಿಸಿಕೊ) ಅಂದರೆ ಸಿಖ್ಖರ ನಾಡು. ಸಿಖ್ರಿಗೆ ಪಗಡಿ ಎಂಬುದು ಗೌರವ ತರುವ ಕುರುಹು. ಹೀಗಾಗಿ ಬ್ರಿಟಿಷರಿಗೆ ತಲೆ ಬಾಗಬೇಡಿ ಎನ್ನುವ ಸಂದೇಶ ಗೀತೆಯನ್ನು ರಚಿಸಿ ಹಾಡಿ ರೈತರಲ್ಲಿದ್ದ ರೋಷವನ್ನು ಬಡಿದೆಬ್ಬಿಸಿದರು. ಇವರ ಮಾತಿಗೆ ಪ್ರತಿಕ್ರಿಯಿಸಿದ ರೈತರು ತಕ್ಷಣ ಬ್ರಿಟಿಷರಿಗೆ ತಿರುಗಿ ಬಿದ್ದರು. ಇದರಿಂದ ರೊಚ್ಚಿಗೆದ್ದ ಬ್ರಿಟಿಷರು ಲಾಲಾ ಲಜಪತರಾಯ ಮತ್ತು ಅಜಿತ್ಸಿಂಗ್ರನ್ನು ಬಂಧಿಸಿ ಮ್ಯಾಂಡ್ಲೆ ಜೈಲಿಗೆ ತಳ್ಳಿದರು. ಇದರಿಂದ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಯಿತು. ಅನಿವಾರ್ಯವಾಗಿ ಬ್ರಿಟಿಷರು ಬಿಡುಗಡೆ ಮಾಡಿ ಇವರನ್ನು ಗಡಿಪಾರು ಮಾಡಿದರು.
ನಂತರ ಅಜಿತ್ಸಿಂಗ್ ಅಪಘಾನಿಸ್ತಾನ ಮತ್ತು ಇರಾನಿನಲ್ಲಿ ವಾಸವಿದ್ದ ಭಾರತೀಯರಿಗೆ ದೇಶಭಕ್ತಿಯ ಕಿಚ್ಚು ಹಚ್ಚಿ ಭಾರತ ಸ್ವಾತಂತ್ರ್ಯದ ಹುಚ್ಚು ಹಿಡಿಸುವ ಕಾರ್ಯ ಮಾಡತೊಡಗಿದರು. ಅಷ್ಟೇ ಅಲ್ಲದೆ ದೇಶದಲ್ಲಿ ಹೋರಾಟ ಮಾಡುತ್ತಿರುವ ಹೋರಾಟಗಾರರಿಗೆಲ್ಲ ಸಹಕಾರ ಪ್ರೋತ್ಸಾಹ ನೀಡಬೇಕಾದವರು ನೀವೇ ಅಲ್ಲವೇ ಎಂದು ಹೇಳಿ ಸಹಾಯ ಮಾಡಲು ಪ್ರೇರಣೆ ನೀಡಿದರು. ಎರಡನೆಯ ಮಹಾಯುದ್ಧ ಮುಗಿದ ನಂತರ ಭಾರತಕ್ಕೆ ಹಿಂದಿರುಗಿದ ಅವರು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ದಿನವೇ ಡಾಲ್ಹೌಸಿಯಲ್ಲಿ ನಿಧನ ಹೊಂದಿದರು. ನಂತರ ಕ್ರಾಂತಿಕಾರಿ ಎಂಬ ಕಾರಣಕ್ಕೆ ಇತಿಹಾಸದಲ್ಲಿಯೂ ಮರೆತು ಹೋದರು.
ಅಗ್ನಿಶಖೆಯ ಹರಿಕಾರ ಖುದಿರಾಂ ಬೋಸ್ ಮತ್ತು ಪ್ರಫುಲ್ಲಾ ಚಾಕಿ
1889ನೇಯ ಡಿಸೆಂಬರ್ನಲ್ಲಿ ಜನ್ಮತಾಳಿದ ಖುದಿರಾಂ ಬೋಸ್ ಚಿಕ್ಕ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡನು. ಅವನ ಅಕ್ಕ ಭಾವನ ಅಕ್ಕರೆಯಲ್ಲಿ ಬೆಳೆದ ಖುದಿರಾಮ್ ಬೋಸನು ಅತಿ ಚಿಕ್ಕ ವಯಸ್ಸಿನಲ್ಲಿಯೇ ಕ್ರಾಂತಿಕಾರಿಗಳೊಂದಿಗೆ ಗುರುತಿಸಿಕೊಂಡು ಬಿಟ್ಟನು. ಬಕೀಂಚಂದ್ರ ಚಟಜರ್ಿ ಬರೆದ ಆನಂದ ಮಠ ಮತ್ತು ಆನಂದದಾತ ಕಾದಂಬರಿಗಳೂ ಅವರ ಮೇಲೆ ಅತ್ಯಂತ ಪ್ರಭಾವ ಬೀರಿದವು. `ವಂದೇ ಮಾತರಂ ಅಂತೂ ಇವರಲ್ಲಿ ದೇಶಭಕ್ತಿಯೇ ಮನತುಂಬಿ ಹರಿದಾಡುವಂತೆ ಮಾಡಿತು. ಹೀಗಾಗಿ ಸುಮಾರು ಹದಿನೈದರ ಹರೆಯದಲ್ಲಿಯೇ ದೇಶಭಕ್ತಿಯನ್ನು ಮೈಗೂಡಿಸಿಕೊಂಡ ಬೋಸ ಕ್ರಾಂತಿಕಾರಿ ಸಂಘಟನೆಗಳ ಜೊತೆಗೆ ನಿಕಟ ಸಂಬಂಧವನ್ನಿಟ್ಟುಕೊಂಡ. ಅಲ್ಲದೇ ಅರ ಕಾರ್ಯವಾಗಿ ಕರಪತ್ರಗಳನ್ನು ಹಂಚಿ ಸಿಕ್ಕಿಬಿದ್ದು ಬಿಡುಗಡೆಯಾದನು.
ಆಗ ತಾನೇ ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚು ಕಾಳ್ಗಿಚ್ಚಾಗಿ ಭುಗಿಲೆದ್ದಿತು. ಇದಕ್ಕೆ ಹಲವಾರು ಪತ್ರಿಕೆಗಳು ಕೂಡ ಸಹಕಾರ ನೀಡುತ್ತಿದ್ದರು. ಹೀಗಾಗಿ ಬ್ರಿಟಿಷರಿಗೆ ವಿರುದ್ಧವಾಗಿ ಬರೆದ ಪತ್ರಿಕೆಗಳ ಮೇಲೆ ಮೊಕದ್ದಮೆ ಹೂಡಲಾಗುತ್ತಿತ್ತು. ಅರವಿಂದ ಘೋಷರ ಪ್ರಕಾಶನದಲ್ಲಿ ಹೊರಬರುತ್ತಿದ್ದ ವಂದೇ ಮಾತರಂ ಪತ್ರಿಕೆಯೂ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಮೊಕದ್ದಮೆಯ ವಿಚಾರಣೆಯನ್ನು ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದ ನಿರಾಯುಧ ಗುಂಪಿನ ಮೇಲೆ ಬ್ರಿಟಿಷರು ಅನವಶ್ಯಕವಾಗಿ ಲಾಠಿ ಪ್ರಹಾರ ಮಾಡಿದರು. ಇದರಿಂದ ಕೆರಳಿದ ಹದಿನೈದು ವರ್ಷದ ಸುಶೀಲ್ ಸೇನ್ ಬ್ರಿಟಿಷ್ ಅಧಿಕಾರಿಗೆ ತಿರುಗಿಸಿ ಹೊಡೆದನು. ಇದರಿಂದ ರೊಚ್ಚಿಗೆದ್ದ ಬ್ರಿಟಿಷ್ ಅಧಿಕಾರಿ ಕಿಂಗ್ಸ್ ಫೋರ್ಡನು ಆ ಯುವಕನನ್ನು ಮ್ಯಾಜಿಸ್ಟ್ರೇಟ್ ಮುಂದೆ ನಿಲ್ಲಿಸಿ ಆತನ ವಯಸ್ಸನ್ನು ಲೆಕ್ಕಿಸದೆ 15 ಛಡಿ ಏಟಿನ ಶಿಕ್ಷೆ ವಿಧಿಸಿ ವಿಕೃತಿಮೆರೆದನು.
ಸುಶೀಲ್ ಕುಮಾರನೇನೋ ಶಿಕ್ಷೆಯನ್ನು ಸಂತೋಷದಿಂದಲೇ ಸ್ವೀಕರಿಸಿದ. ಈ ಅಪ್ರಾಪ್ತ ಬಾಲಕನ ಮೇಲೆ ಲಾಠಿ ಬೀಸಿದ್ದಲ್ಲದೆ, ಉಗ್ರಶಿಕ್ಷೆಗಳನ್ನು ನೀಡುತ್ತಿದ್ದನು. ಇದನ್ನು ಸಹಿಸದ ಕೆಲವು ಕ್ರಾಂತಿಕಾರಿಗಳು ಕಿಂಗ್ಸ್ಪೋಡರ್್ನನ್ನು ಕೊಲ್ಲಲು ತೀಮರ್ಾನಿಸಿದರು. ಇದು ಹೇಗೋ ಸಕರ್ಾರಕ್ಕೆ ತಿಳಿದು ಅವನನ್ನು ಮುಜಾಪರಪುರಕ್ಕೆ ವರ್ಗ ಮಾಡಿದರು.
ಹೇಗಾದರಾಗಲಿ ಕಿಂಗ್ಸ್ಫೋಡರ್್ನನ್ನು ಕೊಲ್ಲಲೇಬೇಕು ಎನ್ನುವ ದೃಢ ನಿಧರ್ಾರದಿಂದ ಈ ಕಾರ್ಯವನ್ನು `ಯುಗಾಂತರ ಗುಂಪಿನ ನಾಯಕರಾದ ಸತ್ಯೇಂದ್ರನಾಥ ಬೋಸ್ರು ಖುದಿರಾಂ ಮತ್ತುಆತನ ಸಹ ಕ್ರಾಂತಿಕಾರಿ ಪ್ರಫುಲ್ಚಾಕಿಗೆ ವಹಿಸಿದರು. ಆಜ್ಞೆಯಂತೆ ತೆರಳಿದ ಈ ಕ್ರಾಂತಿಕಾರಿಗಳು ಕಿಂಗ್ಸ್ಫೋಡರ್್ನ ಚಲನವಲನಗಳನ್ನು ಗಮನಿಸತೊಡಗಿದರು.
ತಪ್ಪಿದ ಬೇಟೆ
ಕಿಂಗ್ಸ್ಫೋಡರ್್ನು ಸಂಜೆ ಕ್ಲಬ್ಬಿನಿಂದ ಮನೆಗೆ ಬರುವ ದಾರಿಯಲ್ಲಿ ಕಾರಿನ ಮೇಲೆ ಬಾಂಬ್ ಹಾಕಲು ನಿರ್ಧರಿಸಲಾಗಿತ್ತು. ಎಂದಿನಂತೆ ಕಾರು ಹೊರಟು ಬಂದಿತು. ಅದರೊಳಗೆ ಯಾರಿದ್ದಾರೆಂದು ಗಮನಿಸದೆ ಬೋಸ್ ಮತ್ತು ಚಾಕಿ ಬಾಂಬ್ ಎಸೆದರು. ಕಿಂಗ್ಸ್ಫೋಡರ್್ ಬದಲಾಗಿ ಅದರಲ್ಲಿದ್ದ ಇಬ್ಬರು ಮಹಿಳೆಯರು ಅಸುನೀಗಿದರು. ಇತ್ತ ಕಿಂಗ್ಸ್ಫೋಡರ್್ನನ್ನು ಕೊಂದೆವೆಂದುಕೊಂಡ ಇವರು ಒಂದೊಂದು ದಿಕ್ಕಿಗೊಬ್ಬರು ಓಡಿದರು. ಈ ಘಟನೆ ನಡೆದದ್ದು 1908ನೆ ಏಪ್ರಿಲ್ 30ರಂದು.
ಆರಂಭವಾದ ಅಗ್ನಿಶಖೆ
ಕ್ರಾಂತಿಕಾರಿಗಳು ಎಸೆದ ಬಾಂಬು ಕಿಂಗ್ಸ್ಫೋಡರ್್ನನ್ನು ಕೊಲ್ಲಲಿಲ್ಲ ನಿಜ. ಆದರೆ ಇಡಿ ಬ್ರಿಟಿಷ್ ಸಾಮ್ರಾಜ್ಯದಲ್ಲಿಯೇ ಮೊದಲ ನಡುಕ ಹುಟ್ಟಿಸಿತು. ತಣ್ಣಗಿದ್ದ ಬ್ರಿಟಿಷರ ನೆಮ್ಮದಿಗೆ ಬೆಂಕಿ ಇಟ್ಟು ಅಗ್ನಿಶಖೆಯನ್ನು ಆರಂಭಿಸಿ ಬಿಟ್ಟಿತು. ಇವರೆಸೆದ ಬಾಂಬು ಕೇವಲ ಕಿಂಗ್ಸ್ಫೋಡರ್್ನ ಗಾಡಿ ಚೂರು ಚೂರು ಮಾಡಿತಲ್ಲದೆ ಬ್ರಿಟಿಷ್ ಸಾಮ್ರಾಜ್ಯವಾದದ ಅಹಂಕಾರ ಮತ್ತು ದರ್ಪವನ್ನು ನುಚ್ಚುನೂರು ಮಾಡಿ ಹಾಕಿತು.
ಸಿಕ್ಕಿಬಿದ್ದಸಿಂಹ ಮತ್ತು ಅಮರವಾದ ಹುಲಿ:
ಮುಜಾಫುರದಿಂದ ಸುಮಾರು, 25 ಮೈಲುಗಳಾಚೆ ಖುದಿರಾಂ ಬೋಸ್ನನ್ನು ಸೆರೆಹಿಡಿಯಲಾಯಿತು. ತಪ್ಪಿಸಿಕೊಳ್ಳಲು ಮಾಡಿದ ಎಲ್ಲ ಸಾಹಸಗಳು ವ್ಯರ್ಥವಾಗಿ ಬಂಧನವಾಗಿ ಹೋಯಿತು. ಅವರ ಮೇಲೆ ವಿಚಾರಣೆ ಎಂಬ ನಾಟಕ ನಡೆದು ಕೊನೆಗೆ ಮರಣದಂಡನೆಯನ್ನು ವಿಧಿಸಲಾಯಿತು. 1908ರ ಆಗಸ್ಟ್ 11ರಂದು ಗಲ್ಲಿಗೇರಿಸಲಾಯಿತು.
ಇತ್ತ ಪ್ರಫುಲ್ಲ್ ಚಾಕಿ ಪೊಲೀಸರೊಂದಿಗೆ ಹೋರಾಡುತ್ತಿರುವಾಗ ತಪ್ಪಿಸಿಕೊಳ್ಳುವುದು ಅಸಾಧ್ಯ ಎಂದು ಗೊತ್ತಾಗುತ್ತಿದ್ದಂತೆ ತಮ್ಮ ರಿವಾಲ್ವರ್ನಿಂದ ತಾನೇ ಸುಟ್ಟುಕೊಂಡು ಅಮರನಾದನು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅಗ್ನಿಯುಗಕ್ಕೆ ಮುನ್ನುಡಿ ಬರೆದಂತಹ ಇಂಥ ಮಹಾನ್ ಚೇತನಗಳು ಜನರಿಗೆ ಅಸ್ಪಷ್ಟವಾದ ಪ್ರತಿಬಿಂಬದಂತಾಗಿರುವುದು ಖೇದಕರವಾಗಿದೆ.
ರಾಶ್ ಬಿಹಾರಿ ಬೋಸ್
ಭಾರತ ಸ್ವತಂತ್ರ್ಯ ಚಳುವಳಿಯಲ್ಲಿ ಕ್ರಾಂತಿಕಾರಿಗಳ ಪಾತ್ರ ಎಷ್ಟು ಮಹತ್ವದ್ದಾಗಿದೆಯೋ, ಕ್ರಾಂತಿಕಾರಿ ಹೋರಾಟದಲ್ಲಿ ರಾಶ್ ಬಿಹಾರಿ ಬೋಸ್ರ ಪಾತ್ರವು ಅಷ್ಟೇ ಮಹತ್ವದ್ದಾಗಿದೆ. ರಾಶ್ ಬಿಹಾರಿ ಬೋಸ್ರವರು ಕ್ರಾಂತಿಕಾರಿಗಳಲ್ಲಿನ ಅನಘ್ರ್ಯ ರತ್ನ ಎಂದು ಹೇಳಬಹುದು.
1910ರಿಂದ 1915ರವರೆಗಿನ ಭಾರತದೊಳಗಿನ ಕ್ರಾಂತಿಕಾರಿ ಚಟುವಟಿಕೆಯಲ್ಲಿನ ಅವರ ಪಾತ್ರ ಮತ್ತು ಅವರ ಆಗ್ನೇಯ ಏಷ್ಯಾದ ಎರಡು ದಶಲಕ್ಷ ಭಾರತೀಯರ ನಡುವೆ ನಡೆಸಿದ ಕ್ರಾಂತಿಕಾರ ಚಟುವಟಿಕೆಗಳು ಸುಭಾಷಚಂದ್ರ ಬೋಸ್ರು ಐ.ಎನ್.ಎ ಕಟ್ಟಲು ಬೇಕಾಗಿದ್ದ ಸೂಕ್ತವಾದಂತಹ ಆಧಾರವನ್ನು ಒದಗಿಸಿಕೊಟ್ಟವು. ಇದರಿಂದಾಗಿಯೇ ಅವರಹೆಸರು ಚಿರಸ್ಥಾಯಿಯಾಗಿ ಉಳಿಯಿತು.
1886ರಲ್ಲಿ ಬಂಗಾಳದ ಒಂದು ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ರಾಶ್ ಬಿಹಾರಿ ಬೋಸರು ಪದವಿ ಪಡೆದಿದ್ದು ಫೋಟರ್್ ವಿಲಿಯಂ ಕಾಲೇಜಿನಿಂದ. 1912ರ ಹಾಡರ್ಿಂಗ್ ಬಾಂಬ್ಸ್ಫೋಟದಲ್ಲಿ ಭಾಗಿಯಾಗುವುದರೊಂದಿಗೆ ಕ್ರಾಂತಿಕಾರಕ ಚಟುವಟಿಕೆಗೆ ಪದಾರ್ಪಣೆ ಮಾಡಿದರು. ಲಾಡರ್್ ಹಾಡರ್ಿಂಗ್ ವೈಸರಾಯ ಆಗಿ ದೆಹಲಿಯಚಾಂದಿನಿ ಚೌಕ್ಗೆ ಬರುತ್ತಿದ್ದಾಗ ಬೋಸರು ಅವರ ಮೇಲೊಂದು ಬಾಂಬ್ ಎಸೆದರು. 1914ರ ಹಾಗೂ 1915ರ ಲಾಹೋರ್ ಮತ್ತು ಬನಾರಸ್ ಪಿತೂರಿಯಲ್ಲಿಯೂ ಅವರ ಪಾತ್ರ ಸಕ್ರಿಯವಾಗೇ ಇತ್ತು.
ಇದೆಲ್ಲವನ್ನು ಗಮನಿಸಿದ ಬ್ರಿಟಿಷರು ಅವರನ್ನು ಸೆರೆ ಹಿಡಿಯಲು ಬಹಳ ಪ್ರಯತ್ನಿಸಿದರು. 1915ರಲ್ಲಿ ತಲೆತಪ್ಪಿಸಿಕೊಂಡು ಜಪಾನ್ ಸೇರಿದರು. ಆಗ ಜಪಾನಿನ ಸಕರ್ಾರದ ಮನ ಒಲಿಸಿ ರಾಶ್ ಬಿಹಾರಿ ಬೋಸರನ್ನು ಬಂಧಿಸಿ ಭಾರತಕ್ಕೆ ಹಸ್ತಾಂತರಿಸಬೇಕೆಂದು ಕೇಳಿಕೊಂಡರೂ ಪ್ರಯೋಜನವಾಗಲಿಲ್ಲ. ಅವರನ್ನು ಜಪಾನಿನ ಬ್ರೆಡ್ ವ್ಯಾಪಾರಿ ದಂಪತಿಗಳು 7 ವರ್ಷಗಳ ಕಾಲ ಸಾಕಿ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಿ ಜಪಾನಿನ ನಾಗರಿಕತೆ ದೊರಕಿಸಿಕೊಟ್ಟರು. ಒಬ್ಬ ಕ್ರಾಂತಿಕಾರಿಗೆ ಅವರು ಮಾಡಿದ ಸಹಾಯವನ್ನು ಇಡೀ ಭಾರತೀಯರು ನೆನಪಿಸಿಕೊಳ್ಳಲೇಬೇಕು.
ಜಪಾನಿ ಪೌರತ್ವ ಬಂದ ನಂತರ ಬಹಿರಂಗವಾಗಿ ಕಾರ್ಯಗತರಾದರು. ಭಾರತೀಯ ವಲಸಿಗರನ್ನು ಪ್ರೇರೆಪಿಸುತ್ತ ಅವರಲ್ಲಿ ಸ್ವತಂತ್ರ್ಯದ ಕಿಚ್ಚು ಹಚ್ಚತೊಡಗಿದರು. 1924ರಲ್ಲಿ ಅವರು ಟೋಕಿಯೋದಲ್ಲಿ `ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ ಪ್ರಾರಂಭಿಸಿದರು. ಅದೇ ಸಿದ್ಧಾಂತವನ್ನು ಆಧಾರವಾಗಿಟ್ಟುಕೊಂಡ ಅವರು ಬ್ರಿಟಿಷರಿಂದ ನರಳುತ್ತಿದ್ದ ಎಲ್ಲಾ ದೇಶದ ಜನರಲ್ಲಿ ಐಕ್ಯತಾ ಭಾವನೆ ಮೂಡಿಸಲು `ಪ್ಯಾನ್ ಏಷ್ಯನ್ ಲೀಗ್ ಎಂಬ ಸಂಸ್ಥೆಯನ್ನು ಪ್ರಾರಂಭಿಸಿದರು. ಈ ಲೀಗ್ನ ವಾಷರ್ಿಕ ಸಮ್ಮೇಳನದಲ್ಲಿ ಅವರು ಮಾಡಿದ ಭಾಷಣ 20 ಕೋಟಿ ಭಾರತೀಯರನ್ನು ಬಡಿದೆಬ್ಬಿಸಿತು.
`ಒಂದು ಅವ್ಯಕ್ತ ರಾಷ್ಟ್ರ. ಇಂಡಿಯಾ, ಒಬ್ಬ ಶತೃ-ಇಂಗ್ಲೆಂಡ್. ಮತ್ತು ಒಂದು ಗುರಿ-ಪೂರ್ಣ ಸ್ವತಂತ್ರ್ಯ, ಈ ಮೂರೂ ಇವೆಯೆಂದು ನಾವೆಲ್ಲರೂ ಸದಾ ನೆನಪಿನಲ್ಲಿಟ್ಟುಕೊಂಡಿರಬೇಕುಎಂದು ಹೇಳುತ್ತಾ ದೇಶಭಕ್ತಿಯ ಜ್ಯೋತಿ ಬೆಳಗಿಸಿದರು.
`ಇಂಡಿಯನ್ ನ್ಯಾಷನಲ್ ಆಮರ್ಿಯಲ್ಲಿ ಸೇರಲು ಜಪಾನ್ನಲ್ಲಿ ಸೆರೆಹಿಡಿದವರನ್ನು, ಸೇನಾ ಸೇವೆಯನ್ನು ತೊರೆದ ಅಧಿಕಾರಿಗಳನ್ನು ಮತ್ತು ಯೋಧರನ್ನು ಪ್ರೇರೇಪಿಸಲು ಮುಖ್ಯ ಕಾರಣರಾದವರೆ ರಾಶ್ಬಿಹಾರಿ ಬೋಸರು.ಹೀಗೆ ಭಾರತ ಮಾತೆಯ ಬಂಧನ ಮುಕ್ತಿಗಾಗಿ ಅವಿರತವಾಗಿ ಶ್ರಮಿಸಿದ ರಾಶ ಬಿಹಾರಿ ಬೋಸರನ್ನು ಕುರಿತು ಸುಭಾಷಚಂದ್ರ ಬೋಸರು `ರಾಶ್ ಬಿಹಾರಿ ಅವರು ಗ್ರೇಟರ್ ಈಸ್ಟ್ ಏಷ್ಯಾ ವಾರ್ ಪ್ರಾರಂಭವಾದಾಗಿನಿಂದ ಪೂರ್ವ ಏಷ್ಯಾದ ಭಾರತೀಯ ಸ್ವರಾಜ್ಯದ ಚಳುವಳಿಗೆ ತಂದೆಯಂತಿದ್ದಾರೆ ಎಂದು ಹೇಳಿದರು.
ಬಿಡುವಿಲ್ಲದ ಪ್ರಯಾಣದಿಂದ ಮತ್ತು ಕ್ರಾಂತಿಕಾರಿಗಳ ಚಟುವಟಿಕೆಗಳಿಂದ ಅವರ ಆರೋಗ್ಯ ಹದಗೆಟ್ಟು 1945ರಲ್ಲಿ ಮೃತರಾದರು.
ಭಾರತದ ಕ್ರಾಂತಿಕಾರಿಗಳಿಗೆಲ್ಲ ಅನಘ್ರ್ಯ ರತ್ನದಂತಿರುವ ರಾಶ್ ಬಿಹಾರಿ ಬೋಸ್ ಸ್ವತಂತ್ರ ಗಂಗೆಯ ತೊರೆಗೆ ಧುಮುಕಿ ದಡ ಸೇರುವ ಮೊದಲೇ ಅಸುನೀಗಿದ್ದು ದುರದೃಷ್ಟವೇ ಸರಿ. ಇಂತಹ ಮಹಾನ್ ಚೇತನ ನಮಗೆ ತಿಳಿಯದಂತೆ ಹೋಗಿರುವುದು ನಮ್ಮಲ್ಲಿನ ಹಾಳು ವ್ಯವಸ್ಥೆಯ ಪ್ರತಿರೂಪವಾಗಿದೆ.
ಚೇತನ ಉದ್ಧಾಮ್ ಸಿಂಗ್
ಅದು 1919 ನೇ ಇಸ್ವಿ ಪಂಜಾಬಿನ ಒಂದು ತೋಟ. ಅದರ ಹೆಸರು ಜಲಿಯನ್ ವಾಲಾಭಾಗ್. ಅಲ್ಲಿ ಸಾವಿರಾರು ಜನರು ಸೇರಿ ಸ್ವತಂತ್ರ್ಯ ಸಂಗ್ರಾಮದ ರೂಪುರೇಷೆಗಳ ಬಗ್ಗೆ ಚಚರ್ಿಸುತಿದ್ದರು. ಆ ತೋಟದ ಸುತ್ತಲೂ ಅಳೆತ್ತರದ ಗೋಡೆ ಇದ್ದು ಒಂದೇ ಗೇಟಿನಿಂದ ಸಂಚಾರ ಕಲ್ಪಿಸಲಾಗಿತ್ತು. ಬ್ರಿಟಿಷ್ ಅಧಿಕಾರಿ ಜನರಲ್ ಡಯರ್ ಯಾವುದೇ ಸುಳಿವನ್ನ ನೀಡ ದೆಯೇ ನಿಶ್ಯಸ್ತ್ರದಾರಿಯಾಗಿದ್ದ ಶಾಂತಿಪ್ರಿಯ ಸಭಿಕರ ಮೇಲೆ ಗುಂಡಿನ ಮಳೆಗರಿಸಿದ. ಇದರಿಂದ ಕ್ಷಣ ಮಾತ್ರದಲ್ಲಿ ರಾಶಿ ರಾಶಿ ಹೆಣಗಳು ಉರುಳಿ ದವು. ಇದನ್ನು ನೋಡುತ್ತಿದ್ದ ಯುವಕ ಇದಕ್ಕೆ ಕಾರಣನಾದ ಜನರಲ್ ಡಯರ್ನನ್ನು ಕೊಲ್ಲಲ್ಲೇ ಬೇಕು ಎನ್ನುವಂತ ಹಠಕ್ಕೆ ಬಿದ್ದ. ಆ ಧೀರ ಕ್ರಾಂತಿಕಾರಿಯೇ ಉದ್ಧಾಮ ಸಿಂಗ್.
ಈ ಗುರಿಯನ್ನು ಹೊತ್ತು ಕೊಂಡು ಮುನ್ನಡೆದ ಉದ್ಧಾಮ ಸಿಂಗ್ ಇಂಗ್ಲೆಂಡ್ಗೆ ತೆರಳಿ ಅಲ್ಲಿನ ಇಂಜಿನಿಯರಿಂಗ್ ಕಾಲೇಜಿಗೆ ಸೇರಿಕೊಂಡ. ಹೆಸರಿಗೆ ಮಾತ್ರ ಕಾಲೇಜು ಸೇರಿಕೊಂಡ. ಇವನ ಗುರಿ ಮತ್ರ ಜನರಲ್ ಡಯರ್ನ ಹತ್ಯೆ ಮಾಡುವುದಾಗಿತ್ತು. ಬೆಳಿಗ್ಗೆ ಕಾಲೇಜು ಸಂಜೆಯಾಗುತ್ತಲೇ ಜನರಲ್ ಡಯರ್ನ ಹುಡಕಾಟ ಮಾಡುತಿದ್ದನು. ಹೀಗೆಯೇ ಹಲವಾರು ದಿನಗಳು ನಡೆದು ಹೋದವು. ಯಾವಾಗಲೂ ಒಂದು ರಿವಾಲ್ವರ್ನನ್ನು ಜೊತೆಯಲ್ಲಿಟ್ಟುಕೊಂಡೇ ತಿರುಗಾಡುತ್ತಿದ್ದನು.
ಶಪಥ ಪೂರೈಸಿದ ಶೂರ
ಜಲಿಯನ್ ವಾಲಾಭಾಗ್ ಹತ್ಯಾಕಾಂಡ ನಡೆದು ಆಗಲೇ 21 ವರ್ಷಗಳ ಗತಿಸಿದ್ದವು. ಉದ್ಧಾಮಸಿಂಗ್ರವರು ಹುಡುಕಾಟಕ್ಕೂ ಒಂದು ದಿನ ಕಾಲ ಕೂಡಿ ಬಂದಿತು. 1940ರ ಮಾಚರ್್ 13ರಂದು ಲಂಡನ್ನ ಕಾಕ್ಸಟಲ್ ಹಾಲಿನಲ್ಲಿ ಡಯರ್ನನ್ನು ಗುಂಡಿಟ್ಟು ಕೊಂದನು. ನೂರಾರು ಜನ ಸಭಿಕರು ಸೇರಿದ್ದ ಹಾಲ್ನಲ್ಲಿ ನಡೆದು ಬಂದ ಉದ್ಧಾಮಸಿಂಗ್ ನೇರವಾಗಿ ಹಣೆಗೆ ಗುಂಡಿಟ್ಟು ಕೊಂದನು. ಅವನ ಮುಖದಲ್ಲಿ ಉಗ್ರಸ್ವರೂಪವನ್ನು ನೋಡಿದರೆ ಯಾವುದೇ ಪೊಲೀಸರು ಕೂಡ ಅವನನ್ನು ಬಂಧಿಸಲು ಹೆದರಿದರು. ಆದರೆ ಶಪಥ ಪೂರೈಸಿಕೊಂಡ ತೃಪ್ತಿಯಲ್ಲಿ ಉದ್ಧಾಮಸಿಂಗ್ ತಾವೇ ಶರಣಾಗತರಾದರು.
ನಂತರ ವಿಚಾರಣೆ ಎಂಬ ನಾಟಕವಾಡಿ ಮಹಾನ್ ಚೇತನ ಉದ್ಧಾಮಸಿಂಗ್ರನ್ನು ಮರಣದಂಡನೆಗೆ ಗುರಿಪಡಿಸಿದರು. 1919ರಲ್ಲಿ ಬ್ರಿಟಿಷ್ ಸಕರ್ಾರ ಬುದ್ಧಿಯಿಲ್ಲದೆ ನಡೆಸಿದ ಹತ್ಯಾಕಾಂಡಕ್ಕೆ ಸೇಡು ತೀರಿಸಿಕೊಂಡ ಸಂತೃಪ್ತಿಯಿಂದ ಉದ್ಧಾಮಸಿಂಗ್ ಅಮರರಾದರು.
ಈ ರೀತಿಯಲ್ಲಿ ನಮ್ಮವರನ್ನುಕೊಂದ ವ್ಯಕ್ತಿಯನ್ನು ಕೊಲ್ಲಲು ಸತತ 21 ವರ್ಷಗಳವರೆಗೆ ಹಸಿದ ಸಿಂಹದಂತೆ ಕಾದು ಕುಳಿತು ಶಪಥ ಪೂರೈಸಿಕೊಂಡ ಪಂಜಾಬಿನ ಈ ಸಿಂಹ ಕೇವಲ ಬೆರಳೆಣಿಕೆಯವರಿಗೆ ಮಾತ್ರ ಗೊತ್ತು. ಇತಿಹಾಸದಲ್ಲಿ ಇವರು ಕೂಡ ಮರೆಯಾಗಿರುವುದು ನಮ್ಮ ದುರ್ಭಾಗ್ಯವೆ ತಾನೇ ?

Saturday, March 19, 2011

ನಾಡು ಮರೆತ ನಾಯಕರು

ಸ್ವತಂತ್ರ್ಯ ಗಂಗೆಗೆ ಸಾವಿರ ತೊರೆಗಳಿವೆ. ಕೇವಲ ಶಾಂತಿ ಮೂಲದಿಂದ ಮಾತ್ರ ಸ್ವ ತಂತ್ರ್ಯ ಲಭಿಸಿದೆ ಎಂಬ ಕಲ್ಪನೆಯಲ್ಲಿರುವ ನಾವುಗಳು ಅದರ ಜೊತೆಯಲ್ಲಿ ಸ್ವತಂತ್ರ್ಯ ಹೋರಾಟಕ್ಕೆ ಮುನ್ನುಡಿ ಬರೆದ ಕ್ರಾಂತಿಕಾರಿ ಚೇತನಗಳ ಬಗ್ಗೆ ತಿಳಿದು-ಕೊಳ್ಳುವುದು ಅಗತ್ಯವಾಗಿದೆ. ಶಾಂತಿದೂತರನೆಲ್ಲ ಪಠ್ಯಪುಸ್ತಕದಲ್ಲಿ ಅಳವಡಿಸಿ ಅವರೇ ಸ್ವತಂತ್ರ್ಯ ಹೋರಾಟದ ಸೇನಾನಿಗಳು ಆವರಿಂದಲೇ ಭಾರತಕ್ಕೆ ಸ್ವತಂತ್ರ್ಯ ಸಿಕ್ಕಿದ್ದು, ಎಂದು ಬಿಂಬಿಸುವ ಮೂಲಕ ದೇಶದ ಸ್ವಾತಂತ್ರ್ಯಕ್ಕಾಗಿ ಆತ್ಮಾರ್ಪಣೆ ಮಾಡಿದ ಕರಿನೀರಿನ ಶಿಕ್ಷೆಗೆ ಗುರಿಯಾದ ಕ್ರಾಂತಿಕಾರಿಗಳನ್ನೆಲ್ಲ ಇತಿಹಾಸದ ಪುಟಗಳಿಂದ ಅಳಿಸಿ ಹಾಕುವ ಪ್ರಯತ್ನ ನಡೆದಿದೆ.
ಸ್ವಾತಂತ್ರ್ಯ ಹೋರಾಟ-ದಲ್ಲಿ ಪ್ರಮುಖವಾಗಿ ಎರಡು ಗುಂಪುಗಳಿದ್ದವು. ಒಂದು ಶಾಂತಿಪ್ರಿಯ ಹೋರಾಟ ಗಾರರು ಮತ್ತೊಂದು ಕ್ರಾಂತಿ ಕಾರಿಗಳ ಪಡೆ. ಎರಡು ಪಂಥಗಳ ದಾರಿ ಬೇರೆಯಾಗಿದ್ದೇನೋ ನಿಜ, ಆದರೆ ಅಂತಿಮ ಗುರಿ ಒಂದೇ ಆಗಿತ್ತು. ಅದು ಭಾರತ ಮಾತೆಯ ಬಂಧನ ಮುಕ್ತಿ. ಆದರೆ ಸ್ವತಂತ್ರ್ಯ ಸಿಕ್ಕಿದ್ದು ಕೇವಲ ಶಾಂತಿಪ್ರಿಯರಿಂದಲೇ ಎಂದು ಹೇಳುತ್ತಾ ಕ್ರಾಂತಿಕಾರಿ ಹೋರಾಟ ಗಾರರನ್ನು ಉಗ್ರಗಾಮಿ-ಗಳೆಂದು ಪರಿಗಣಿಸಿ ಅವರ ತ್ಯಾಗ ಬಲಿದಾನಗಳನ್ನು ಲೆಕ್ಕಿಸದೆ ಇತಿಹಾಸದಲ್ಲಿ ತೆರೆಮರೆಗೆ ಸರಿಸಲಾಗಿದೆ.
ಇತಿಹಾಸದಲ್ಲಿ ತೆರೆಮರೆಯಾಗಿರುವ ಕ್ರಾಂತಿಕಾರಿಗಳ ಕುರಿತಾದ ಸಂಕ್ಷಿಪ್ತ ವಿವರ ಈ ಕೆಳಗೆ ಕೊಡಲಾಗಿದೆ.
ಕ್ರಾಂತಿಗೆ ಮುನ್ನುಡಿ ಬರೆದ
ಛಾಪೇಕರ್ ಸಹೋದರರು
ನಮ್ಮ ಯುವಪೀಳಿಗೆಗೇನು ಗೊತ್ತು ಇತಿಹಾಸ ತೋರಿದ್ದನ್ನು ಸುಮ್ಮನೆ ನಂಬಿಕೊಂಡು ನಡೆದು ಬಿಡುತ್ತಾರೆ. ಆದರೆ ತೆರೆಮರೆಗೆ ಸರಿದ ಮಹತ್ಮರೆಷ್ಟೋ ಜನ ಗೊತ್ತೇ ಇಲ್ಲದೆ ಹೋಗಿದ್ದಾರೆ. ಅಂತಹವರಲ್ಲಿ ಈ ಛಾಪೇಕರ ಸಹೋರರು ಕೂಡ ಇದ್ಧಾರೆ.
ಶ್ರೀ ಹರಿ ಛಾಪೇಕರ ಅವರ ಮೂವರು ಮಕ್ಕಳಾದಂತಹ ಧಾಮೋದರ, ಬಾಲಕ್ರಿಷ್ಣನ್ ಮತ್ತು ವಾಸುದೇವ ಅವರು ಹುಟ್ಟಿದ್ದು ಮಹರಾಷ್ಟ್ರದ ಛರುಷ್ವಾರ್ ಎಂಬ ಹಳ್ಳಿಯಲ್ಲಿ ವಿದ್ಯಾವಂತರಾಗಿದ್ದ ಈ ಸಹೋದರರು ಕ್ರಾಂತಿಕಾರಿ ಮನೋಭಾವದವರಾಗಿದ್ದರು. ವ್ಯಾಯಾಮ ಯೋಗ ಮಾಡಿಕೊಂಡು ಕಟ್ಟು ಮಸ್ತಾಗಿದ್ಧವರು.
ಮರಾಠಿ ಭಾಷೆಯಲ್ಲಿ ಪ್ರಕಟವಾಗುತ್ತಿದ್ದ ಬಾಲಗಂಗಾಧರ ತಿಲಕರ `ಕೇಸರಿ' ಪತ್ರಿಕೆಯನ್ನು ಓದುವುದರೊಂದಿಗೆ ಪ್ರಭಾವಿತರಾಗಿದ್ದರು. ಹೀಗಾಗಿ ಅವರನ್ನು ಸಹಜವಾಗಿಯೇ ಕ್ರಾಂತಿಕಾರಕ ಭಾವನೆ ಮೈಗೂಡಿ ಬಿಟ್ಟಿದ್ದವು. ಅದೇ ಸಮಯಕ್ಕೆ ಸರಿಯಾಗಿ ಅಂದರೆ 1897ರಲ್ಲಿ ಪುಣೆ ನಗರ ಸಂಪೂರ್ಣ ಪ್ಲೇಗಿನಿಂದ ನರಳುತ್ತಿತ್ತು. ಜನರ ಸಾವು, ಅಕ್ರಂದನ ಮುಗಿಲು ಮುಟ್ಟಿತ್ತು. ಆದರೆ ಬ್ರಿಟಿಷ್ ಸರ್ಕಾರ ಯಾವುದೇ ರೀತಿಯ ಕಾರ್ಯವನ್ನು ಮಾಡದೇ ಹೋಯಿತು. ಆದರೆ ಬ್ರಿಟನ್ ರಾಣಿ ವಿಕ್ಟೋರಿಯಾಳು ಸಿಂಹಾಸನ ಏರುವ ಕಾರ್ಯಕ್ರಮವನ್ನು ವಿಜೃಂಬಣೆಯಿಂದ ನಡೆಸುವು-ದಕ್ಕೆ ಬ್ರಿಟಿಷ್ ಸಕರ್ಾರ ತೀಮರ್ಾಣಿಸಿತು. ಪ್ಲೇಗ್ ಕಮೀಷನರ್ ಆಗಿ ನೇಮಕಗೊಂಡಿದ್ದ ಬ್ರಿಟಿಷ್ ಅಕಾರಿ ಮಿ.ರಾಂಡ್ ಪ್ಲೇಗ ನೀರ್ಮುಲನೆ ಬದಲು ರಾಣಿ ಪಟ್ಟಾಕಾರದಲ್ಲಿ ಭಾಗವಹಿಸಲು ಉತ್ಸುಕನಾಗಿದ್ದು, ಮತ್ತು ಅವನ ದುರ್ನಡತೆ ಛಾಪೇಕರ್ ಸಹೋದರರನ್ನು ಕೆರಳಿಸಿದವು. ಹೀಗಾಗಿ ಛಾಪೇಕರ್ ಸಹೋದರರು ರಾಂಢನನ್ನು ಗುಂಡಿಟ್ಟು ಕೊಂದು ಕ್ರಾಂತಿಕಾರಕ ಹೋರಾಟಕ್ಕೆ ಭಾಷ್ಯ: ಬರೆದರು. 1905 ಭಂಗಾಳ ವಿಭಜನೆ-ಯಾದಾಗ ದೇಶದ ಇತರ ಭಾಗಗಳಲ್ಲಿಯೂ ಸಹ ಕ್ರಾಂತಿಯ ವಾತಾವರಣೆ ಸೃಷ್ಟಿಸಿದರು. ಅವರನ್ನು ಸೆರೆಹಿಡಿದ ಬ್ರಿಟಿಷ್ ಸಕರ್ಾರ ಮೂರು ಸಹೋದರರನ್ನು ಕ್ರಮವಾಗಿ 1898 ರ ಏಪ್ರೀಲ್ 8, 1899ರ ಮೇ 8, 1899 ಮೇ ಹತ್ತರಂದು ನೇಣುಗಂಬಕ್ಕೇರಿಸಿದರು. ಕ್ರಾಂತಿಗೆ ನಾಂದಿ ಹಾಡಿದ ಈ ವೀರ ಸಹೋದರರು ಇಂದು ಎಷ್ಟೋ ಜನರಿಗೆ ಗೊತ್ತೇ ಇಲ್ಲದ್ದು ನಮ್ಮ ದುರದೃಷ್ಟವಲ್ಲದೆ ಮತ್ತೇನು?
ಅಪ್ರತಿಮ ದೇಶಭಕ್ತ
ವಿನಾಯಕ ದಾಮೋದರ ಸಾವರ್ಕರ್
ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿ ಸೆರೆಮನೆಗೆ ಸೇರಿದವರು ಲಕ್ಷೋಪಾದಿಯಲ್ಲಿದ್ದಾರೆ. ಆದರೆ ಸ್ವತಂತ್ರ್ಯ ಗಂಗೆಯ ಒಡಲಿಗೆ ಧುಮುಕಿ `ಕರಿನೀರಿನ' (ಕಾಲಾಪಾನಿ) ಶಿಕ್ಷೆ ಅನುಭವಿಸಿದ ಅಪ್ರತಿಮ ಹೋರಾಟಗರ ಎಂದರೆ ವಿನಾಯಕ ದಾಮೋದರ್ ಸಾವರಕರ್ (ವೀರ ಸಾವರ್ಕರ್)
ಕೇವಲ ಸ್ವಾತಂತ್ರ್ಯ ಹೋರಾಟಗಾರರಲ್ಲದೆ, ಕ್ರಾಂತಿಕಾರರು, ಕವಿ, ಚಿತ್ರಕಾರ, ಸಮಾಜ ಸುಧಾರಕರಾಗಿ ಜನರ ಮನಸ್ಸಿನಲ್ಲಿ ಅಳಿಸಲಗದ ಮುದ್ರೆ ಒತ್ತಿದ್ದಾರೆ.
1883 ರ ಮೇ 28 ರಂದು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಬಾಗ್ರು ಎಂಬ ಹಳ್ಳಿಯಲ್ಲಿ ಸಾವರ್ಕರರು ಜನಿಸಿದರು. ಶಾಲಾ ದಿನಗಳಿಂದಲೆ ದೇಶಭಕ್ತಿಯನ್ನು ಮೈಗೂಡಿಸಿಕೊಂಡರು. ಪುಣೆಯ ಪಗ್ಯರ್ುಸನ್ ಕಾಲೇಜಿನಲ್ಲಿ ಪದವಿ ಮಗುಸಿದ ಇವರು ಮುಂಬೈ ಲಾ ಕಾಲೇಜಿನಲ್ಲಿ ಉನ್ನತ ವ್ಯಾಸಂಗವನ್ನು ಮುಗಿಸಿದರು. ಕಲಿಕೆಯ ಸಮಯದಲ್ಲಿಯೇ ಸ್ವಾತಂತ್ರ್ಯದ ಹುಚ್ಚು ಹಿಡಿಸಿಕೊಂಡ ಅವರು `ಅಭಿನವ ಭಾರತ' ಎಂಬ ಕ್ರಾಂತಿಕಾರಿ ಸಂಘಟನೆಯನ್ನು ಕಟ್ಟಿದರು.
ಬ್ಯಾರಿಸ್ಟರ್ ಆಗಬೇಕಿದ್ದವರು ಬಂಧನವಾದರು
1906 ರಲ್ಲಿ ಉನ್ನತ ಶಿಕ್ಷಣಕ್ಕಾಗಿ ಇಂಗ್ಲೆಂಡಿಗೆ ಪಯಣ ಬೆಳೆಸಿದ ಸಾವರ್ಕರ್ರವರು ಅಲ್ಲಿಯೂ ತಮ್ಮ ಕ್ರಾಂತಿಕಾರಕ ನಿಲುವುಗಳಿಂದ ಹಿಂದೆ ಸರಿಯಲಿಲ್ಲ.
ಇಟಲಿಯ ಒಬ್ಬ ಶ್ರೇಷ್ಠ ದೇಶಭಕ್ತನ ಕುರಿತಾಗಿ ಒಂದು ಪುಸ್ತಕವನ್ನು ರಚಿಸಿದರು. ಇದನ್ನು ಭಾರತಕ್ಕೆ ತಂದು ತಜರ್ುಮೆಮಾಡಿ ಪ್ರಕಟಿಸಿದ ತಪ್ಪಿಗೆ ಸಾವರ್ಕರ್ ಅಣ್ಣ ಗಣೇಶ್ರವರು ಜೈಲುಪಾಲಾದರು. 1857 ರ ಮಹಾದಂಗೆಯ ಕ್ರಾಂತಿಕಾರಿ ಹೋರಾಟಗಾರನೊಬ್ಬನ ಕುರಿತು ``ಇಂಡಿಯನ್ ವಾರ್ ಆಫ್ ಇಂಡಿಪೆಂಡೆನ್ಸ್" ಎಂಬ ಪುಸ್ತಕ ರಚಿಸಿದರು. ಇದನ್ನು ಸಕರ್ಾರ ತಕ್ಷಣ ನಿಷೇಸಿತು.
ಹೀಗೆಯೇ ಕ್ರಾಂತಿಕಾರಿ ಮನೋಭಾವದೊಂದಿಗೆ ಅಭಿನವ ಭಾರತದ ಒಂದು ಶಾಖೆಯನ್ನು ಇಂಗ್ಲೆಂಡಿನಲ್ಲಿ ಆರಂಭಿಸಿ ಬ್ರಿಟೀಷರ ಕೆಂಗಣ್ಣಿಗೆ ಗುರಿಯಾದರು. ಕರ್ಜನ್ ವೈಟ್ನ ಮರಣದ ಕಾರಣದಿಂದ ದಸ್ತಗಿರಿಯಾದ ಸಾವರ್ಕರ್ ವಿಚಾರಣೆಗಾಗಿ ಭಾರತಕ್ಕೆ ಬಂದರು. ಬ್ಯಾರಿಸ್ಟರ್ ಆಗಿ ಸೂಟು ಬೂಟು ಧರಿಸಿಕೊಂಡ ಭಾರತಕ್ಕೆ ಬರಬೇಕಿದ್ದ ಮಹಾತ್ಮ ಬಂಯಾಗಿ ಬಂದಿದ್ದರು.
ಕನಿ ನೀರಿನ ಶಿಕ್ಷೆಗೆ ಗುರಿಯಾಗಿ ಅಂಡಮಾನಿನ ನರಕಸದೃಷವಾದ ಸೈಲ್ಯೂಲರ್ ಜೈಲು ಸೇರಿದರು. ಅಲ್ಲಿಯೂ ಪಟ್ಟು ಬಿಡದ ಅವರು ಸುಧಾರಣಾ ಕಾರ್ಯ ಮುಂದುವರೆಸಿದರು. ತಾವಿದ್ದ ಜೈಲಿನ ಕೊಠಡಿಗಳ ಗೋಡೆಗಳ ಮೇಲೆ ಹತ್ತುಸಾವಿರ ದೇಶ ಭಕ್ತಿಯ ಸಾಲುಗಳನ್ನು ಮಳೆಯಿಂದ ಕೆತ್ತಿ ಸ್ವತಂತ್ರ್ಯದ ಸಂದೇಶ ಸಾರುತ್ತಿದ್ದರು. ಜೈಲಿನಲ್ಲಿ ನಡೆಯುತ್ತಿದ್ದ ಮತಾಂತರ ಕೃತ್ಯಗಳನ್ನು ಖಂಡಿಸಿದರು. 23 ವರ್ಷಗಳ ಸುರ್ಘ ಕಷ್ಟದ ಹಾದಿಯನ್ನು ಸವೆಸಿ ಬಂದ ಸಾವರ್ಕರಿಗೆ ಗಾಂಜಿ ನೇತೃತ್ವದ ಕಾಂಗ್ರೇಸ್ನ ಮೇಲೆ ನಂಬಿಕೆ ಇರಲಿಲ್ಲ. ಹೀಗಾಗಿ ಹಿಂದೂ ಮಹಾಸಭೆ ಸೇರಿ ಅವರ ಅಧ್ಯಕ್ಷರಾದರು. (ಒಂದು ವೇಳೆ ಕಾಂಗ್ರೇಸ್ಸೇರಿದ್ದರೆ ಆವರು ಉಚ್ಛ ಶ್ರೇಣಿ ನಾಯಕರಾಗಿರುತ್ತಿದ್ದರೇನೋ?)
1940 ರಲ್ಲಿ ಬ್ರಿಟಿಷರದಿಂದ ತಪ್ಪಿಸಿಕೊಂಡು ಭಾರತದಿಂದ ಹೋಗುವ ಮೊದಲು ಸುಭಾಷ ಚಂದ್ರ ಭೊಸರು ಸಾವರ್ಕರ್ರನ್ನು ಭೇಟಿ ಮಾಡಿದ್ದರು. ಅವರ (ಐ್ಞಛಜಿಚ್ಞ ಘೆಚಠಿಜಿಟ್ಞಚ್ಝ ಅ್ಟಞಢ)ಗೆ ಸಹಾಯಕವಾಗಲೆಂದು ಸೈನ್ಯಕ್ಕೆ ಸೇರಲು ಯುವಕರಿಗೆ ಕರೆನೀಡುತ್ತಿದ್ಧರು. ``ಇಂಡಿಯಾದ ರಾಜಕೀಯವನ್ನು ಭಾರತೀಯಗೊಳಿಸಿ, ಮತ್ತು, ಹಿಂದುತ್ವವನ್ನು ಮಿಲಿಟರಿಗೊಳಿಸಿ" ಎಂದು ಸಂದೇಶವಿತ್ತರು.
ಇಂತಹ ಅಪ್ರತಿಮ ದೇಶ ಪ್ರೇಮಿಯನ್ನು ಗಾಂಜಿ ಮರಣದ ನಂತರ ಹೀನಾಯವಾಗಿ ನಡೆಸಿಕೊಳ್ಳಲಾಯಿತು. ಈ ಮಹಾನ್ ಸೇನಾನಿ, ದೇಸಭಕ್ತನನ್ನು ಇತಿಹಾಸದ ಪುಟದಲ್ಲಿ ಖಳನಾಯಕನಂತೆ ಗುರುತಿಸಲು ಹೋರಟಿರುವುದು ದುರುದೃಷ್ಟವೇ ಸರಿ.
ನನ್ನ ದೇಹವನ್ನು ಛಿದ್ರಮಾಡಿ ಎಂದ ರ ಸುಶಿಲ್ ಸೇನ್
ಹದಿನೈದರ ಹರೆಯ ಎಂದರೆ ಸಧ್ಯ ನಾವು ಇನ್ನೂ ಚಿಕ್ಕವರು ಬುದ್ದಿ ಕಡಿಮೆ ಇರುವವರು ಎಂದು ಅಲಕ್ಷ್ಯ ತೋರುತ್ತೇವೆ. ಆದರೆ 15 ನೇ ವಯಸ್ಸಿನಲ್ಲಿಯೇ ಕ್ರಾಂತಿಕಾರಕ ನಿಲುವು ತೋರುವುದರೊಂದಿಗೆ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿ ಕಾಡಿದ ದೀಮಂತ ನಾಯಕ ಸುಶೀಲ್ ಸೇನ್.
1907 ರ ಅಗಸ್ಟ್ 26 ರಂದು ಕಲ್ಕತ್ತಾದ ಲಾಲ್ kOTಅನತ್ತ ಯುವಕರ ಗುಂಪೊಂದು ಘೋಷಣೆ ಕೂಗುತ್ತ ಹೊರಟಿತ್ತು. ಇದನ್ನು ಸಹಿಸದ ಬ್ರಿಟಿಷ ಸಕರ್ಾರದ ಗುಲಾಮಿ ಪೊಲೀಸರು ಇವರ ಮೇಲೆ ಲಾಠಿ ಪ್ರಹಾರ ಆರಂಭಿಸಿತು. ಹೊಡೆದಷ್ಟು ಜೋರಾಗಿ `ವಂದೇ ಮಾತರಂ' ಕೂಗೂ ಮಾರ್ಧನಿಸುತ್ತಿತ್ತು. ರೊಚ್ಚಿಗೆದ್ದ ಪೊಲೀಸರ ಲಾಠಿಚಾಜರ್್ ದಾರಿ ಹೋಕರ ಮೇಲೂ ಬಂದಿತು. ಆಗ ಅದನ್ನು ಸಹಿಸದ 15 ರ ಹರೆಯದ ಬಾಲಕ ಪೊಲೀಸರ ಕೈಲಿದ್ದ ಲಾಠಿ ಕಿತ್ತುಕೊಂಡು `ನಿನ್ನ ಲಾಠಿಯ ರುಚಿ ನೀನು ಸ್ವಲ್ಪ ನೋಡು' ಎಂದವನೇ ದಪ್ಪವಾದ ವ್ಯಕ್ತಿಯನ್ನು ಮನಸೋ ಇಚ್ಛೆ ಥಳಿಸಿದನು. ಇವನು ಹೊಡೆದ ವೇಗ ಎಷ್ಟಿತ್ತೆಂದರೆ ಇವನನ್ನು ಹಿಡಿಯಲು ಪೊಲೀಸರು ಹರಸಾಹಸ ಪಟ್ಟರು. ಆ ರ ಯುವಕ ಬೇರಾರು ಅಲ್ಲ. ಸುಶಿಲ್ ಸೇನ್.
ಕಲ್ಕತ್ತಾದ `ಒಂದೇ ಮಾತರಂ` ಪತ್ರಿಕೆಯ ಸಂಪಾದಕ ಅರವಿಂದರು, `ಭಯವನ್ನು ಬಿಟ್ಟು ಬಿಡು' ಎನ್ನುವ ಘೋಷಣೆ ಈ ಯುವಕನ ಎದೆಯಲ್ಲಿ ಹೊಕ್ಕು ಬಿಟ್ಟಿತ್ತು.
ಹುಡುಗನನ್ನು ಮ್ಯಾಜಿಸ್ಟ್ರೇಟರ್ ಮುಂದೆ ನಿಲ್ಲಿಸಲಾಯಿತು. ಆಗ ಹುಡುಗನಿಗೆ ಹದಿನೈದು ಛಡಿ ಏಟಿನ ಶಿಕ್ಷೆಯನ್ನು ನೀಡಿದರು. ಪ್ರತಿ ಹೊಡೆತಕ್ಕೂ ಅವನ ಬಾಯಿಯಿಂದ ಬರುತ್ತಿದ್ಧ ಒಂದೇ ಮಾತರಂ ಧ್ವನಿ ಅವನಲ್ಲಿದ್ದ ಅಪ್ರತೀಮ ದೇಶ ಪ್ರೇಮಕ್ಕೆ ಸಾಕ್ಷ್ಯ ನೀಡುತ್ತಿತ್ತು.
ಈ ಅಮಾನವೀಯ ಕೃತ್ಯವನ್ನು ಎಲ್ಲ ಪತ್ರಿಕೆಗಳು ಖಂಡಿಸಿದವು. ಸುಶಿಲ್ ಗೌರವಾರ್ಥ ಕಲ್ಕತ್ತಾದ ನ್ಯಾಷನಲ್ ಕಾಲೇಜನ್ನು ಒಂದು ದಿನ ಮುಚ್ಚಲಾ-ಯಿತು. 1907 ರ ಆಗಸ್ಟ್ 8 ರಂದು ಆ ಹುಡುಗನಿಗೆ ಸುರೇಂದ್ರನಾಥ ಬ್ಯಾನಜರ್ಿಯವರು ಕಳುಹಿಸಿದ ಸ್ವರ್ಣಪದಕ ನೀಡಿ ಸನ್ಮಾನಿಸಲಾಯಿತು.
ಸುಶೀಲ್ ಸೇನ್ ತನ್ನ ಯೌವ್ವನದಲ್ಲಿಯೇ ಭಾರತಾಂಬೆಯ ಮುಕ್ತಿಗೆ ಪಣತೊಟ್ಟು ಕ್ರಾಂತಿಕಾರಿ ಗುಂಪಿಗೆ ಸೇರಿಕೊಂಡು ಚಟುವಟಿಕೆ ಆರಂಭಿಸಿದನು. ನಂತರ ದಿನಗಳಲ್ಲಿ ಅಂದರೆ 15 ಮೇ 1908 ರಲ್ಲಿ ಅಲಿಪುರ ಕೇಸಿನಲ್ಲಿ ಅರವಿಂದರ ಜೊತೆಗೆ ಬಂಸಲಾಯಿತು. 7 ವರ್ಷಗಳ ಶಿಕ್ಷೆಯೂ ಆಯಿತು. ನಂತರದ ವಿಚಾರಣೆಯಲ್ಲಿ ಖುಲಾಸೆಯಾಗಿ ಹೊರಬಂದ ಸುಶೀಲ್ ಸೇನ್ ಮತ್ತೆ ತನ್ನ ಕ್ರಾಂತಿಕಾರಕ್ಕೆ ನಿಲುವುಗಳನ್ನು ಇನ್ನಷ್ಟು ವಿಸ್ತರಿಸಿಕೊಂಡು ಹೋರಾಟಕ್ಕೆ ಅಣಿಯಾದನು. ಇದು ಸ್ವತಂತ್ರ ಹೋರಾಟದ ಸಂದರ್ಭ, ಅದಕ್ಕಾಗಿ ಹಣಕಾಸಿನ ಅಗತ್ಯವಿದ್ದುದರಿಂದ ಕ್ರಾಂತಿಕಾರಿಗಳು ಶ್ರೀಮಂತರ ಮನೆಗಳನ್ನು ಮತ್ತು ಸಕರ್ಾರಿ ಇಲಾಖೆಗಳನ್ನು ಲೂಟಿ ಮಾಡುತ್ತಿದುದು ಸಾಮಾನ್ಯವಾಗಿತ್ತು. 1915 ರಲ್ಲಿ ನದಿಯಾ ಜಿಲ್ಲೆಯ ಪ್ರಾಗಪುರದಲ್ಲಿ ಡಕಾಯಿತಿ ಮಾಡಿಕೊಂಡು ದೋಣಿಯಲ್ಲಿ ತಪ್ಪಿಸಿಕೊಳ್ಳುತ್ತಿದ್ದವರನ್ನು ಪೊಲೀಸರ್ರು ಬೆನ್ನಟ್ಟಿದರು. ಆ ಪೊಲೀಸರಿಗೂ ದೋಣಿ ವಿಹಾರಗಳ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಸುಶೀಲ್ ಸೇನ್ ಗಂಭೀರವಾಗಿ ಗಾಯಗೊಂಡರು. ಸಾಯುವ ಮೊದಲು ಇತರ ಕ್ರಾಂತಿಕಾರಿಗಳಿಗೆ ``ನನ್ನ ರುಂಡವನ್ನು ಮುಂಡದಿಂದ ಬೇರ್ಪಡಿಸಿ ಎಸೆಯಿರಿ ಎಂದು ಹೇಳಿದರು. ಇದರಿಂದ ಗುರುತಿಸಲಾಗದೆ ವಿಚಾರಣೆ ಬಂಧನ ನಿಲ್ಲುತ್ತವೆ. ಎಂಬುದು ಅವರ ನಿಲುವಾಗಿತ್ತು.
ಸಾಯುವಾಗಲೂ ಕೂಡ ತನ್ನ ಕ್ರಾಂತಿಕಾರಿ ನಿಲುವುಗಳಿಂದ ಹೊರಬರದ ಸುಶಿಲ್ ಸೇನ್ ಅಸಾಮಾನ್ಯವಾದ ಗುರಿ ಮುಟ್ಟುವುದಕ್ಕಾಗಿ ಎಡೆಬಿಡದೆ ಉತ್ಸಾಹ ಮತ್ತು ಹೋರಾಟದ ನಿಲುವನ್ನು ಹೊಂದಿದ್ದ. ಆದರೆ ನಾಡಿಗಾಗಿ ಪ್ರಾಣ ನೀಡಿದ ಈ ಮುಕುಟ ಮಣಿ ಇತಿಹಾಸದ ಎಲ್ಲೋ ಒಂದು ಮೂಲೆಯಲ್ಲಿ ಮರೆಯಾಗಿ ಬಿಟ್ಟಿದೆ.
ಸತ್ತು ಬದುಕುವೆನೆಂದು ಕಾತರ್ಾರ್ ಸಿಂಗ್ ಸೊರಬಾ
ಅವರಿಗೆ ಬರೀ ಹತ್ತೊಂಬತ್ತು ವರ್ಷ ವಯಸ್ಸು, ಕೋಟರ್ಿನ ಕಟಕಟೆಯಲ್ಲಿ ಎದೆ ಗುಂದದೆ ನಿಂತಿದ್ದರು. ನ್ಯಾಯಾಶರು ಮರಣದಂಡನೆಯ ತೀಪರ್ು ನೀಡಿದರು. ಆದರೆ ಒಂದು ಅವಕಾಶ ಎನ್ನುವಂತೆ `ಮರಣ ದಂಡನೆಗೆ ಬದಲಾಗಿ ಜೀವಾವ ಶಿಕ್ಷೆಗಾಗಿ ಬೇಡಿಕೊ" ಎಂದು ಉಪದೇಶ ನೀಡಿದರು. ಆದರೆ ಆ ಹುಡುಗನ ಮಾತು ಕೇಳಿದ ನ್ಯಾಯಾಶರೇ ಧಂಗಾಗಿ ಹೋದರು.
``ಜೈಲಿನಲ್ಲಿ ಕೊಳೆಯುವುದಕ್ಕೆ ಬದಲಾಗಿ, ಈಗ ಸತ್ತು ಪುನರ್ಜನ್ಮ ಪಡೆದು, ಮತ್ತೊಮ್ಮೆ ಮಾತೃ-ಭೂಮಿಯ ಸ್ವಾತಂತ್ರ್ಯಕ್ಕೆ ಹೋರಾ ಡುತ್ತೇನೆ." ಹೀಗೆ ಹೇಳಿದ ಆ ಯುವಕನೇ ಕತರ್ಾರ್ ಸಿಂಗ್ ಸೊರಬಾ.
ಪಂಜಾಬಿನ ಲೂಯಾನ ಪ್ರಾಂಥದ ಸೊರಬಾ ಎಂಬಲ್ಲಿ 1896 ರಲ್ಲಿ ಜನಿಸಿದ ಕತರ್ಾರ ಸಿಂಗ್ ಚಿಕ್ಕ ವಯಸ್ಸಿನಲ್ಲಿಯೇ ಅಮೇರಿಕಾದಲ್ಲಿದ್ದ ಗದರ ಪಕ್ಷವನ್ನು ಸೇರಿದ್ಧರು. ಮೊದಲೇ ಕ್ರಾಂತಿಕಾರಿ ಮನೋಭಾವ ಹೊಂದಿದ್ದ ಅವರು 1913 ರಲ್ಲಿ ಭಾರತಕ್ಕೆ ಹಿಂತಿರುಗಿದ ಕೂಡಲೇ ಕ್ರಾಂತಿಕಾರಕ ಚಟುವಟಿಕೆಗಳಲ್ಲಿ ತೊಡಗಿದರು.
ಮಿಲಿಟರಿ ಬಗ್ಗೆ ತಿಳಿದುಕೊಂಡಿದ್ದ ಕತರ್ಾರ್ ಸಿಂಗ್ ಸೈನಿಕರನ್ನು ಸ್ವತಂತ್ರ್ಯ ಹೋರಾಟಕ್ಕೆ ಸಿದ್ಧಗೊಳಿಸುತ್ತಿದ್ದನು. ಹೀಗೆಯೇ ಮುಂದುವರೆದ ಸಂದರ್ಭದಲ್ಲಿ 1918 ರಲ್ಲಿ ಲಾಹೋರ ಪಿತೂರಿಯೂ ನಡೆಯಿತು. ಇದರಲ್ಲಿ ಇವರ ಕೈವಾಡವಿದೆ ಎಂದು ಬಂಸಿದ ಬ್ರಿಟಿಷ್ ಸಕರ್ಾರ ಅವರ ಆಸ್ತಿ ಪಾಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿತಲ್ಲದೇ ಮರಣ ದಂಡನೆಯನ್ನು ವಿಸಿತು.
ಸ್ವಾತಂತ್ರ್ಯಗಂಗೆಯ ಸಾವಿರ ತೊರೆಗಳಲ್ಲಿ ಒಬ್ಬನಾಗಿ ಬಂದ ಕತರ್ಾರ್ ಸಿಂಗ ಸೊರಬಾ ಇಂದು ಯುವಕರಿಗೆ ಆದರ್ಶ ವ್ಯಕ್ತಿಯಾಗಬೇಕಿತ್ತು. ಆದರೆ ಇಂದು ಅವರ ಹೆಸರು ಎಷ್ಟೋ ಜನರಿಗೆ ಗೊತ್ತೆ ಇಲ್ಲದಿರುವುದು ನಮ್ಮ ದೌಭರ್ಾಗ್ಯ.
ಕ್ರಾಂತಿಕಾರಿಯಾಗಿದ್ದರು ಶಾಂತಿಗೆ ತಲೆಬಾಗಿದ ಬಾಬಾ ಪೃಥ್ವಿಸಿಂಗ್ ಅಜಾದ್
ಪಂಜಾಬಿನ ಒಂದು ಪುಟ ಹಳ್ಳಿಯಲ್ಲಿ ಹುಟ್ಟಿದ ಬಾಬಾ ಪೃಥ್ವಿಸಿಂಗ್ ಶಾಲೆಯ ವಿದ್ಯಾಭ್ಯಾಸವಾದ ಕೆಲವೇ ವರ್ಷಗಲ ನಂತರ ರಾಜಕೀಯಕ್ಕೆ ಧುಮುಕಿದರು ಮುಂದುವರೆದು 1911 ರಲ್ಲಿ ಯುನೈಟೆಡ್ ಸ್ಟೇಟ್ಸ್ನಲ್ಲಿ ಗದ್ದರ್ ಪಕ್ಷದ ಕಾರ್ಯ ಕರ್ತರಾಗಿ ಸೇರಿಕೊಂಡರು. ಜೊತೆ ಜೊತೆಗೆ ಕ್ರಾಂತಿಕಾರಕ ಚಟುವಟಿಕೆಗೆ ಚಾಲನೆ ನೀಡಿದರು.
ತರುವಾಯ 1914 -15 ರಲ್ಲಿ ನಡೆದಂತಹ ಲಾಹೋರ ಪಿತೂರಿಯ ಮೊಕದ್ಧಮೆಯಲ್ಲಿ ಬಂಸಿ ಆರುವರ್ಷಗಳ ಅಂಡ ಮಾನಿನ ಜೈಲಿಗೆ ಕಳುಹಿಸಲಾ ಯಿತು. 1921 ರಲ್ಲಿ ಪೊಲೀಸರು ಬಾಬಾರನ್ನು ಬಂಸಿ ರೈಲಿನಲ್ಲಿ ಕರೆದೊಯ್ಯು ತ್ತಿರುವಾಗ ಓಡುತ್ತಿದ್ದ ರೈಲಿನಿಂದಲೇ ಜಿಗಿದು ತಪ್ಪಿಸಿಕೊಂಡ ಅವರ ಧೈರ್ಯ ಪರಾಕ್ರಮ ಮೆಚ್ಚಲೇಬೇಕು. ಅಂಡಮಾನಿನಿಂದ ಭಾರತಕ್ಕೆ ಬರುತ್ತಿದ್ದ ಇವರು ಸುಮಾರು ವರ್ಷಗಳ ಕಾಲ ಭೂಗತರಾಗಿವುಳಿದರು.
ಕ್ರಾಂತಿಕಾರಿ ಮನೋಭಾವವನ್ನು ಹೊಂದಿದ್ದರು ಕೂಡ ಗಾಂ ಜಿಯವರ ಮಾತುಗಳಿಂದ ಪ್ರಭಾವಿತರಾಗಿದ್ದರು. ಹೀಗಾಗಿ ಅಹಿಂಸಾ ಸಿದ್ಧಾಂತಗಳಲ್ಲಿ ನಂಬಿಕೆ ಇಲ್ಲದಿದ್ಧರೂ ಕೂಡ ಕ್ವಿಟ್ ಇಂಡಿಯಾ ಚಳುವಳಿ'ಯಲ್ಲಿ ಭಾಗವಹಿಸಿದ್ದರು.
ಮಹಾತ್ಮಾ ಗಾಂಜಿಯವರ ಮಾತುಗಳಿಂದ ಪ್ರಭಾವಿತರಾದ ಬಾಬಾರವರು ತಮ್ಮನ್ನು ತಾವು ಸಕರ್ಾರಕ್ಕೆ ಒಪ್ಪಿಸಿಕೊಂಡರು. ಸ್ವತಂತ್ರ್ಯದ ಸಿಹಿವುಂಡ ಅದೃಷ್ಟವಂತ ಕ್ರಾಂತಿಕಾರಿಯಾದ ಬಾಬಾ ಪೃಥ್ವಿಸಿಂಗ್ ಆಜಾದ್-ರವರು ನಂತರದ ದಿನಗಳಲ್ಲಿ ತಮ್ಮನ್ನು ತಾವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡರು.
ಹೀಗೆ ಸ್ವತಂತ್ರ್ಯ ಹೋರಾಟದಲ್ಲಿ ಸಂಪೂರ್ಣವಾಗಿ ತೊಡಗಿ ಕೊಂಡಿದ್ದ ದೇಶಭಕ್ತ ಬಾಬಾ ಪೃಥ್ವಿಸಿಂಗ ಎಂದರೆ ಯಾರು ಎಂದು ಕೇಳುವ ಮಟ್ಟದಲ್ಲಿ ಇತಿಹಾಸದಲ್ಲಿ ಕಾಣೆಯಾಗಿರುವುದು ವಿಪರ್ಯಾಸ . ಇಂತಹ ಮಹಾನ್ ನಾಯಕರು ನಮ್ಮಿಂದ ಮರೆಯಾಗಿರುವುದು ನಾನು ಕಂಡ ನತದೃಷ್ಟೆ ಭಾರತದ ನೋವಿನ ಕತೆಯಾಗಿದೆ.