Tuesday, April 5, 2011

ಹಗರಣ

ತಗಡಿನ ವಸ್ತುವಿಗೆ ಚಿನ್ನದ ಲೇಪನ ಇದುವೇ ಭಾರತದ ರಾಜಕಾರಣ ಹೊಳೆಯುವುದು ಇದರ ಹೊರ ಮೈಬಣ್ಣ

ಒಳಗಡೆ ತುಂಬಿದೆ ಬರೀ ಹಗರಣ
ಮೇವು ಹಗರಣ,ಶೇರು ಹಗರಣ
ತೆಹಲ್ಕದಂತ ಶವಪೆಟ್ಟಿಗೆ ಹಗರಣ

ಹಗರಣಗಳಿಂದ ಗೊತ್ತಾಗುವುದು

ರಾಜಕಾರಣದ ಒಳಗಿನ ಹೂರಣ


ಚುನಾವಣೆಯು ಬಂದಿತೆಂದರೆ

ಎಲ್ಲರು ಕರ್ಣನ ವಂಶಸ್ತರೆ

ಬೇಡಿದವರಿಗೆ ಬೇಡಿದ ಧಾನ

ನಗನಾಣ್ಯಗಳದೇ ಬಹುಮಾನ

ರಂಬೆ ಉರ್ವಶಿಯರ ನೃತ್ಯದ ಜೊತೆಗೆ

ಮಾಡು ಸುರಾಪಾನದ ಉಡುಗೊರೆ ಕೊಡುಗೆ

ಉಡುಗೊರೆಯನ್ನು ಪಡೆದ ಜನತೆಯು

ಮಾರಿಕೊಲ್ಲುವರು ತಮ್ಮ ಮತವನ್ನು


ರಾಜಕಾರಣಿಗಳ ಎಂಜಲ ಕಾಸಿಗೆ

ಕೈವೊದ್ದಿ ದಾಸರಾಗುವರು ಕೊನೆಗೆ

ಹಗರಣಗಳಿಗೆ ಮೆತ್ತಿಲಾಗುವರು

ಜನರ ತುಳಿದು ಇವರು ಮೇಲಕೆ ಬರುವರು

ಮತ್ತೆ ಹಗರನಗಳದ್ದೆ ದರಬಾರು

ಮತ್ತೆ ರಾಜಕಾರನಿಗಳದ್ದೆ ಕಾರಬಾರು

ದುದ್ದಿನಾಷೆಗೆ ಸ್ವಾಭಿಮಾನವ ಮಾರಿ

ಬೆಳೆಸುತಲಿಹರು ಸಮಾಜದ ವೈರಿ

ಎಚ್ಚರವಾದರೆ ಜನತೆ ಒಂದು ಸಾರಿ

ತೊಡೆದು ಹಾಕ ಬಹುದು ನಮ್ಮನು ಕಾಡುವ ಮಾರಿ

No comments:

Post a Comment