Friday, April 1, 2011

ಬದಲಾಗುವರೇ ಭಾರತೀಯರು?

ಜಗತ್ತಿನ ಶಕ್ತಿಯುತ ರಾಷ್ಟ್ರ ಎಂದರೆ ನಾವು ಜಪಾನ್ ಎಂದು ಒಪ್ಪಿಕೊಳ್ಳಲೇ ಬೇಕು. ಯಾಕೆ? ಅಂತಿರಾ ಆಗೊಂದು ಬರಿ ಜಗತ್ತಿನ ಹಿರಿಯಣ್ಣ ಎನಿಸಿಕೊಂಡಿರುವ ಅಮೇರಿಕ ಸಿಕ್ಕ ರಾಷ್ಟ್ರವಾದ್ ಜಪಾನ್ ಮೇಲೆ ಅಣುಬಾಂಬ ದಾಳಿ ಮಾಡಿತು.ಇದರಿಂದ ಇಡಿ ಜಪಾನ್ ತತ್ತರಿಸಿ ಹೋಗಿತ್ತು.ಆಗ್ ಇಡಿ ವಿಶ್ವ ಸಮುದಯವೆಲ್ಲ ಇನ್ನು ಮುಂದೆ ಜಪಾನ್ ಕಥೆ ಮುಗಿದೇ ಹೋಯಿತು ಎಂದುಕೊಂಡಿದ್ದರು. ಜಪಾನ್ ಮೇಲಿನ ದಾಳಿ ಅಲ್ಲಿನ ದೊಡ್ಡ ನಗರಗಳಾದ ಹಿರೋಶಿಮಾ ಮತ್ತು ನಾಗಾಸಾಕಿಗಳು ಸಂಪೂರ್ಣ ಬೂಡಿಯದವು ಆದ್ರೆ ಜಪಾನ್ ಇದರಿಂದಾ ಧ್ರುತಿಗೆಡಲಿಲ್ಲ ಕೆಲವೇ ಕೆಲವು ದಿನಗಳಲ್ಲಿ ಬೂದಿಯಿಂದಲೇ ಎದ್ದು ಬರುವ ಫಿನಿಕ್ಸ ಹಕ್ಕಿಯಂತೆ ಮೈಕೊಡವಿ ಎದ್ದು ಜಗತ್ತಿನ ತಂತ್ರಜ್ಞಾನ ಕ್ಷೇತ್ರದಲ್ಲಿ ಹಿರಿಯನ್ನನಾಗಿ ಬೆಳೆದು ನಿಂತಿತು.ಇದು ಜಪಾನಿಗರ ನಿಶ್ಚಲವಾದ ಮನಸ್ತಿತಿ ಕುರಿತು ತಿಳಿಸಿಕೊಡುತ್ತದೆ. ಮಾನವ ಸ್ವಾರ್ಥದ ದುರಂತದಿಂದಲೇ ಪುಟಿದೆದ್ದು ಬಂದ ಜಪಾನಿಗೆ ಪ್ರಕೃತಿ ಮಾಡಿದ ದುರಂತ ಏನು ಅಲ್ಲ ಎನ್ನುವಂತೆ ಮತ್ತೆ ಚೆತರಿಸಿಕೊಂಡುಬಿತ್ತಿದೆ.ಮೊನ್ನೆ ಮೊನ್ನೆಯಷ್ಟೇ ನೈಸರ್ಗಿಕ್ ವಿಕೋಪಕ್ಕೆ ತುತ್ತಾಗಿದ್ದ ಜಪಾನ ಕೇವಲ ಸುನಾಮಿ ಹಾವಳಿ ಮಾತ್ರವಲ್ಲದೆ ಅನುವಿಕಿರ್ಣ ಸೋರಿಕೆಯಿಂದ ಅಪಾರ ಸಾವು ನೋವು ಅನುಭವಿಸಿತು. ಆದರು ಎದೆಗುಂದಲಿಲ್ಲ ಡಾರ್ವಿನ್ ಸಿದ್ದಂತವಾದ "strugle for exsistence" ನಿಯಮವನ್ನು ಸ್ವಲ್ಪ ಬದಲಿಸಿ "strugle for achivements" ಎನ್ನುವುದನ್ನು ಸಾಬೀತು ಪಡಿಸಲು ಹೊರಟಿರುವ ಜಪಾನಿಗರ ಸಾಮರ್ತ್ಯವನ್ನು ನಾವು ಮೆಚ್ಚಲೇ ಬೇಕು. ಸುನಾಮಿ ಅಪ್ಪಳಿಸಿದ ಮರುದಿನವೇ ಅನೇಕ ಕಛೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿರುವುದು ಇಡೀ ಜಗತ್ತೇ ನಿಬ್ಬೆರಗಾಗಿ ನೋವುವಂತಾಗಿದೆ. ಹದಗೆಟ್ಟ ಹೆದ್ದಾರಿಗಳು,ಭಾಗ್ನವಾದ್ ನಿವೇಶನಗಳು,ಕೊಚ್ಚಿಹೋದ ಕಾರುಗಳು ,ಮುಚ್ಚಿಹೊದ್ ಸಮುಚ್ಚ್ಯಗಳಿಂದ ತುಂಬಿಹೋಗಿತ್ತು ಜಪಾನ್ . ಆದರೆ ಕೇವಲ್ ಒಂದುವರ ಕಳೆಯುವುದರೊಳಗೆ ಅಲ್ಲಿ ಇಂಥ ದುರ್ಗಟನೆ ಸಂಭವಿಸಿದ್ದು ನಿಜವೇ ಎನ್ನುವ ಮಟ್ಟದಲ್ಲಿ ಮತ್ತೆ ಪುನರ್ ನಿರ್ಮಾಣಗೊಂಡಿದೆ. ಇದನ್ನು ನೋಡುತ್ತಿದ್ದರೆ ಅವರ ಕಾರ್ಯದ ವೇಗ,ಅವರಲ್ಲಿನ ಶಿಸ್ತು ಸಂಯಮ, ಹೋರಾಟದ ಮನೋಭಾವ ಜಗತ್ತಿಗೆ ಮದರಿಯಗುಬೇಕು ಎನಿಸುತ್ತದೆ. ಅದಕ್ಕೆ ಒಂದು ಚಿಕ್ಕ ಪೆನ್ನಿನಿಂದ ಹಿಡಿದು ದೈತ್ಯಗಾತ್ರದ ಯಂತ್ರಗಳ ವರೆಗೂ ಜಾಗತಿಕ ಮಾರುಕಟ್ಟೆಯನ್ನು ಜಪಾನ್ ಆಕ್ರಮಿಸಿಕೊಂಡಿದೆ. ಇಲ್ಲಿಯವರೆಗೂ "made in japan"ಎನ್ನುವಾ ಹೆಗ್ಗಳಿಕೆ ಹಾಗೆ ಉಳಿಸಿಕೊಂಡು ಬಂದಿದೆ. ಭಾರತದ ಒಂದು ರಾಜ್ಯದ ವಿಸ್ತಿರ್ನದಷ್ಟಿರುವ ಜಪಾನ್ ಇಂದು ಜಗತೀನ ಯಾವ ರಾಷ್ಟ್ರಕ್ಕೂ ಸವಾಲು ಹಾಕುವ ಮಟ್ಟದಲ್ಲಿದೆ .
ಇದೆಲ್ಲವನ್ನು ನೋಡುತ್ತಾ ಮನಸ್ಸು ಕೊಂಚ ವಿಚಲಿತವಗುತ್ತದೆ. ನಮ್ಮ ದೇಶದ ಕುರಿತು ಹಲವಾರು ಪ್ರಶ್ನೆಗಳು ಜೊತೆಯಲ್ಲಿಯೇ ಬೇಸರ ಹುಟ್ಟಿಕೊಳ್ಳುತ್ತದೆ.ವಿಶ್ವದ ದೊಡ್ದರಾಷ್ಟ್ರಗಳ ಪಟ್ಟಿಯಲ್ಲಿ ಏಳನೇ ಸ್ತನವನ್ನು ಹೊಂದಿರುವ ಭಾರತ ಮಾನವ ಸಂಪನ್ಮೂಲದಲ್ಲಿ ಎರಡನೇ ಸ್ತಾನವನ್ನು ಹೊಂದಿದೆ.ಇಷ್ಟೆಲ್ಲಾ ಹೊಂದಿರುವ ಭಾರತದೆಶವೆಕೆ ಇನ್ನು ಶಕ್ತಿಯುತ ರಾಷ್ಟ್ರ ಎನಿಸಿಕೊಳ್ಳುತ್ತಿಲ್ಲ ?ಜಪಾನಿಗರ ಹಾಗೆ ನಮ್ಮವರು ಏಕೆ ವಿಚಾರ ಮಾಡುತ್ತಿಲ್ಲ? ಎನ್ನುವ ಪ್ರಶ್ನೆಗಳು ನಮ್ಮಲ್ಲಿ ಕಾಡದೆ ಇರವು. ಉತ್ತರಕರ್ನಾಟಕದಲ್ಲಿ ಪ್ರವಾಹ ಬಂದು ಹೋಗಿ ಸುಮಾರು ಒಂದು ವರ್ಷ ಗತಿಸಿತು. ಆದರೆ ಅಂದು ಪ್ರವಾಹದಲ್ಲಿ ಸಂತ್ರಸ್ತರಾಗಿ ಉಳಿದವರು ಇಂದಿಗೂ ಕೂಡ ಅತಂತ್ರ ಸ್ತಿತಿಯಲ್ಲಿಯೇ ಜೀವನಸಾಗಿಸುತ್ತಿದ್ದರೆ. ಇದನ್ನು ಗಮನಿಸಿದರೆ ನಮ್ಮಲ್ಲಿನ ಬೇಜವಾಬ್ದಾರಿತನ ಮತ್ತು ಹದಗೆಟ್ಟ ವ್ಯವಸ್ತೆಯ್ ದರ್ಶನವಾಗುತ್ತದೆ. ನಮ್ಮಲ್ಲಿ ಏನಾದರು ದುರಂತ ಆದರೆ ಸಾಕು ಕೇಂದ್ರ ಮಂತ್ರಿಯಿಂದ ಹಿಡಿದು ಚಿಲ್ಲರೆ ರಾಜಕಾರಣಿವರೆಗೂ ಬೀದಿಗಿಳಿದು ಪರಿಹಾರ ನಿಧಿ ಸಂಗ್ರಹ,ಚಂದಾ ಸಂಗ್ರಹಿಸೋಕೆ ಶುರುವಿಟ್ಟುಕೊಳ್ಳುತ್ತಾರೆ. ಬದಲಿಗೆ ನೊಂದವರಿಗೆ ನೇರವಾಗಿ ಸಹಾಯ ಮಾಡುವ ಮಟ್ಟದ್ದಲ್ಲಿ ಯಾರು ಪ್ರಯತ್ನಿಸುವುದಿಲ್ಲ ನೊಂದವರು ಮತ್ತೆ ಬದುಕು ಕಟ್ಟಿಕೊಳ್ಳುವ ಯೋಚನೆ ಕೂಡಾ ಮಾಡುವುದಿಲ್ಲ. ಇ ರೀತಿಯಾಗಿ ಬಂದ ಹಣದಿಂದ ತಮ್ಮ ಖಜಾನೆ ತುಂಬಿಸಿಕೊಳ್ಳುವ ಜನನಾಯಕರಿರುವಾಗ ಎಲ್ಲಿಂದ ಉದ್ದಾರ ಅಭಿವೃದ್ದಿ ನೀವೇ ಹೇಳಿ. ಅಂದು ಸಂತ್ರಸ್ತರ ಪರಿಹಾರ ನಿಧಿ ಲಪಟಾಯಿಸಿದ್ದಾರೆ ಎನ್ನುವ ಆರೋಪ ಹೊತ್ತಿರುವಾ ಮುಖಂಡರು ಇಂದು ಪರಮ ಪತಿವ್ರತೆಯ ಗೆಟಪ್ಪಿನಲ್ಲಿ ತಿರುಗಾದುತ್ತಿರುವುದು ಕಂಡರೆ ನಮ್ಮ ದೇಶದ ಬ್ರಷ್ಟತೆ ಎಷ್ಟರಮಟ್ಟಿಗಿದೆ ಎಂಬುದು ಮನದಟ್ಟಾಗುತ್ತದೆ.
ಜಪಾನಿನಲ್ಲಿ ಒಂದು ದಿನದ ಮುಷ್ಕರ ಎಂದರೆ ಕಾರ್ಮಿಕರೆಲ್ಲರೂ ಕಪ್ಪುಪಟ್ಟಿ ಧರಿಸಿಕೊಂಡು ದಿನಕ್ಕಿಂತ ಎರಡು ಘಂಟೆ ಹೆಚ್ಚು ಕೆಲಸ ಮಾಡುತ್ತಾರೆ. ಇದರಿಂದ ಪ್ರತಿಭಟನೆಯ ಜೊತೆಗೆ ಪ್ರಗತಿಯು ಆಗುತ್ತದೆ. ಆದರೆ ನಮ್ಮಲ್ಲಿ ಮುಷ್ಕರ ಎಂದರೆ ಇರೋ ಕೆಲಸವನ್ನು ಬಿಟ್ಟು ಭಾರತ ಬಂದ ,ಕರ್ನಾಟಕ ಬಂದ,ಬಸ್ಸಿಗೆ ಬೆಂಕಿ, ಕಚೇರಿಗೆ ಕಲ್ಲು ಮುಂತಾದ ದುಸ್ಕ್ರುತ್ಯಗಳೇ ನಡೆಸಿದರೆ ಅಭಿವೃದ್ದಿಯ ಮಾತೆಲ್ಲಿಂದ ಬರಬೇಕು ನೀವೇ ಹೇಳಿ? ನಮ್ಮ ಇಂಥ ಕೊಳಕು ಮನಸ್ತಿತಿ ನೋಡಿದ ಬ್ರಿಟಿಷರು "ಭಾರತ ಎಂಬುದು ಅತ್ಯಂತ ದಡ್ಡ ಜನರಿರುವ ಅತಿ ದೊಡ್ಡ ದೇಶ ಭಾರತ "ಎಂದು ಕರೆದಿದ್ದು. ನಮ್ಮವರು ಜಪಾನಿಗರ ಹಗೆ ಆಗೋದು ಯಾವಾಗ?

No comments:

Post a Comment