Wednesday, April 6, 2011

ಕ್ರಾಂತಿಕಾರಿಗಳೆನು ದೇಶಭಾಕ್ತರಲ್ಲವೇ ?



ಕೆಲವೊಮ್ಮೆ ಬೇಡವೆಂದರು ಮನದಲ್ಲಿ ಹುಟ್ಟಿದ ಎಷ್ಟೋ ಭಾವನೆಗಳು ಹೊರಬರಲಾರದೆ ಅಲ್ಲಿಯೇ ಸತ್ತು ಮನಸೆಂಬುದು ಸೂತಕದ ಮನೆಯಾಗಿಬಿಡುತ್ತದೆ.ಅಲ್ಲಿ ನೀರವ ಮೌನ ಆವರಿಸಿ ವಿಚಿತ್ರ ಪ್ರಶ್ನೆಗಳು ತಲೆ ಎತ್ತುತ್ತವೆ.ಹಾಗೆ ತಲೆ ಎತ್ತಿದ ಪ್ರಶ್ನೆಗಳಲ್ಲಿ ಇದು ಕೂಡ ಒಂದು. ಹೌದು ಕ್ರಾಂತಿಕಾರಿಗಳೇನು ದೇಶಭಕ್ತರಲ್ಲವೆ?.ಸ್ವತಂತ್ರ ಹೋರಾಟದಲ್ಲಿ ಅವರ ಪಾತ್ರವೇ ಇಲ್ಲವೇ?ಶಾಂತಿ ದೂತತರು ಮಾತ್ರ ದೇಶಪ್ರೇಮಿಗಳೇ? ಹೀಗೆ ವಿಚಾರ ಮಾಡುತ್ತ ಹೋದಂತೆ ಪ್ರಶ್ನೆಗಳ ಸರಮಾಲೆ ಬೆಳೆಯುತ್ತ ಹೋಗುತ್ತದೆ. ಮೊದಲಿನಿಂದಲೂ ತಾರತಮ್ಯ ತುಂಬಿದ ಭಾರತೀಯ ಸಮಾಜದಲ್ಲಿ ದೇಶಭಕ್ತರಿಗೆ ಗೌರವ ನೀಡುವಲ್ಲಿಯು ಇದು ಮುಂದುವರೆದಿದ್ದು ನಮ್ಮ ಜನರ ವಿಕೃತ ಮನಸ್ತಿತಿಯ ಕುರಿತು ದರ್ಶನ ಮಾಡಿಸುತ್ತದೆ.
ಹದಿ ಹರೆಯದವರಿಂದ ಹಿಡಿದು ಮುದಿ ವಯಸಸಿನವರ ತನಕ ಯಾರನ್ನು ಕೇಳಿದರು ಅವರ ಬಾಯಲ್ಲಿ ಬರುವುದು ನಮ್ಮ ದೇಶಕ್ಕೆ ಸ್ವತಂತ್ರ ತಂದು ಕೊಟ್ಟವರು ಬಾಪೂಜಿ ಮತ್ತು ನೆಹರೂಜಿ. ಅದರ ಹೊರತು ಅನ್ಯ ಪದವೆಂಬುದೆ ಇಲ್ಲ. ಇದು ನಮ್ಮ ದೌಭರ್ಾಗ್ಯವೇ ತನೇ?.ಬ್ರೀಟಿಷರ ಕದಂಬ ಭಾಹುವಿನಿಂದ ಭಾರತಮಾತೆಯನ್ನು ಬಿಡಿಸಲು ಆತ್ಮಾರ್ಪಣೆ ಮಾಡಿದ ಮಹನೀಯರಿಗೆ ನಾವು ಗೌರವ ಕಂಡರೆ ಮನಸೆಂಬುದು ಮಂಜುಗಡ್ಡೆಯಾಗಿ ಬಿಡುತ್ತದೆ. ಅಲ್ಲಿ ಮತ್ತೆ ನಾವು ಮಾಡುತ್ತಿರುವುದು ಸರಿಯೇ ಎಂಬ ಪ್ರಶ್ನೆ ಮೂಡುತ್ತದೆ. ನಿಜ ಹೇಳಬೇಕೆಂದರೆ ಸ್ವಾತಂತ್ರ ಹೋರಾಟದಲ್ಲಿ ಆತ್ಮಾರ್ಪಣೇ ಗೈದವರು ಕ್ರಾಂತಿಕಾರಿಕಾರಿಗಳೇ ವಿನಃ ಶಾಂತಿಪ್ರೀಯರಲ್ಲ.
ಸ್ವಾತಂತ್ರ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಜೀವನನ್ನು ಮುಡುಪಾಗಿಟ್ಟ ಬಾಪೂಜಿ ನಿಜವಾದ ದೇಶಭಕ್ತರು ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಗೆಯೆ ದೇಶಭಕ್ತನ ಸೋಗು ಹಾಕಿಕೊಂಡು ತಮ್ಮ ಕಾರ್ಯ ಸಾಧಿಸಿಕೊಳ್ಳುತ್ತದ್ದ ನೆಹರುನನ್ನು ಯಾವ ಬಾಯಿಂದ ದೇಶ ಭಕ್ತರೆಂದು ಕರೆಯಲಿ. ದೇಶಕ್ಕಾಗಿ ನೆಹರು ಮಾಡಿದ್ದಾದರೂ ಏನು?. ಪಂಚಶಿಲ ತತ್ವ ಎನ್ನುತ್ತ ಚೈನಾ-ಭಾರತ ಯುದ್ಧದಲ್ಲಿ ಭಾರತ ಹೀನಾಯವಾಗಿ ಸೋಲುವುದಕ್ಕೆ ಕಾರಣವಾದ ನೆಹರು ದೇಶಭಕ್ತನೆ?.ತಾನು ಮಾತ್ರ ಭೊಗವಿಲಾಸಿ ಜೀವನ ನಡೆಸುತ್ತ ಭಾರತಿಯ ಸೈನಿಕರಿಗೆ ಪೂರೈಸಬೇಕಾದ ಕನಿಷ್ಠ ಸೌಲಭ್ಯಗಳನ್ನು ನೀಡದೆ ಸಾವಿರಾರು ಸೈನಿಕರ ಸಾವಿಗೆ ಕಾರಣನಾದ ನೆಹರು ಮಹಾತ್ಮನೆ?
ಬ್ರಿಟಿಷ್ ಸಕರ್ಾರ ನಮ್ಮನ್ನು ನಾಯಿಗಳಂತೆನಡೆಸಿಕೊಳ್ಳುತ್ತದ್ದರು ಅವರ ವಿರುದ್ಧ ಒಂದು ಪ್ರತಿಭಟನೆಯ ಚಿತ್ಕಾರವೆತ್ತದ ಇವರು ನಮ್ಮ ದೇಶದ ಹೆಮ್ಮೇಯ ಪುತ್ರ ಸುಭಾಶಚಂದ್ರ ಭೋಸರ ಆಜಾದ್ ಹಿಂದ್ ಪೌಜ್ ವಿರುದ್ಧ ಕತ್ತಿ ಹಿಡಿಯುತ್ತೇನೆ ಎಂದು ಹೇಳಿದ ನೆಹರು ದೇಶ ಭಕ್ತರೆ?ಕೇವಲ ಲೇಡಿ ಮೌಂಟ್ ಬ್ಯಾಟನ್ ಜೊತೆಗಿನ ಸಾಂಗತ್ಯ ಬೇಳೆಸಲು ಇಂದು ಭಾರತ ಪಾಕಿಸ್ತಾನ ಎಂದು ಭಾರತ ಹಡೆದ ಒಡಲಿಗೆ ಚೂರಿ ಹಾಕಿದ ನೆಹರು ದೇಶಭಕ್ತರೆ? ಇವರನ್ನು ನಾವು ಹೇಗೆ ದೇಶಭಕ್ತರು ಎಂದು ಕರೆಯಬೇಕು.
ಕಾರಣವಿಷ್ಟೇಮೊದಲಿನಿಂದಲು ನಮ್ಮಜನರಮನಸಲ್ಲಿ ಕೇವಲ ಕೆಲವರಿಂದಲೆ ದೇಶಕ್ಕೆ ಸ್ವತಂತ್ರ ಸಿಕ್ಕಿತು ಎಂದು ಬೆರಳುಮಾಡಿ ತೋರಿಸುವ ಕೆಲಸವನ್ನು ಕಾಂಗ್ರೆಸ್ಸಕರ್ಾರ ಅಚ್ಚುಕಟ್ಟಾಗಿ ಮಾಡಿ ಮುಗಿಸಿ ಬಿಟ್ಟಿದೆ. ಇದರಿಂದಾಗಿ ಎಷ್ಟೋ ಕ್ರಾಂತಿಕಾರಿ ದೇಶಭಕ್ತರೆಲ್ಲರ ಇತಿಹಾಸ ತೆರೆಮರೆಯಾಗಿದ್ದು ಮುಚ್ಚಿಹೋದ ಸತ್ಯಗಳಾಗಿವೆ. ಕ್ರಾಂತಿಕಾರಿಗಳನ್ನು ಒಂದು ಕಡೆಗಿಡಿ ಶಾಂತಿ ಪ್ರಿಯರನ್ನೆ ನಮ್ಮವರು ಎಷ್ಟು ನಿರ್ಲಕ್ಷಿಸಿದ್ದಾರೆ ಎನ್ನುವುದಕ್ಕೆ ಒಂದು ಸಣ್ಣ ಉದಾಹರಣೆ ನೋಡಿ. ಅಕ್ಷೊಬರ್ ಎರಡರೆಂದು ಮಹಾತ್ಮಾಜಿಯವರ ಹುಟ್ಟಿದ ದಿನ ನಿಜ ದೇಶಾದ್ಯಂತ ಅದನ್ನು ನಾವು ಆಚರಿಸುತ್ತೆವೆ. ಆದರೆ ಅದೆದಿನ ಹುಟ್ಟಿದ ನಾಡುಕಂಡ ಮಹಾನ್ ನಾಯಕರಲ್ಲಿ ಒಬ್ಬರಾದ ಲಾಲ್ಬಹಾದ್ದೂರಶಾಸ್ತ್ರಿ ನೆನಪಾಗುವುದೆ ಇಲ್ಲ ಅಲ್ವಾ?. ನವೆಂಬರ್ 14 ಮಕ್ಕಳ ದಿನಾಚರಣೆ ಹೆಸರಲ್ಲಿ ನೆಹರು ಹುಟ್ಟಿದ ಹಬ್ಬವನ್ನು ಆಚರಿಸುವ ನಮಗೆ ಗಾಂಧಿ ತೆಗೆದುಕೊಂಡ ನಿಧರ್ಾರವನ್ನೆ ಪ್ರಶ್ನಿಸುವ ಮನೋಭಾವ ಹೊದಿದ್ದ ಉಕ್ಕಿನ ಮನುಷ್ಯ ಸದರ್ಾರ ವಲ್ಲಭ ಬಾಯಿ ಪಟೇಲರು ಹುಟ್ಟಿದ್ದು ಅಕ್ಟೋಬರ್ 31ರಂದು ಎಂದು ಯಾರಿಗೂ ಗೊತ್ತಲ್ಲ ಇದು ನಮ್ಮ ದೇಶದ ಇತಿಹಾಸ. ಗಾಂದಿ ಬಾಲಬಡುಕರಿಗೆ ಉಪ್ಪರಿಗೆಯ ಸ್ಥಾನ ಆದರೆ ವಿರೋಧಿಸಿದವರಿಗೆ ಮಾತ್ರ ಇಂಥ ಬಹುಮಾನ ಇದೇ ನಮ್ಮ ದೌಭರ್ಾಗ್ಯವಲ್ಲವೇ?
ಮೊದಲಿನಿಂದಲು ನಮ್ಮ ಪಠ್ಯಪುಸ್ತಕಗಳಲ್ಲಿ ಮತ್ತು ಇತಿಹಾಸದಲ್ಲಿ ಶಾಂತಿಪ್ರೀಯರು ಮಾತ್ರಾ ದೇಶಭಕ್ತರು ಕ್ರಾಂತಿಕಾರಿಗಳೆಲ್ಲ ದಾರಿ ತಪ್ಪಿದ ದೇಶ ಭಕ್ತರು ಎಂದು ಬಿಂಬಿಸುವ ಕಾರ್ಯ ವ್ಯವಸ್ತಿತವಾಗಿ ಮಡಲಾಗಿದೆ. ಇದಕ್ಕೆ ಉದಾಹರಣೆ ಎನ್ನುವಂತೆ ನೆಹರು ತಂದೆ ಮೋತಿಲಾಲ್ ಅಲಿಯಾಸ್ ಶೊಕಿಲಾಲ್ ನೆಹರು ಬರಿ ಬ್ರಿಟಿಷರ ಪಾದದ ಧುಳನ್ನು ಹಣೆಗೆ ವಿಭೂತಿಯಾಗಿಸಿಕೊಳ್ಳತ್ತಿದ್ದರು ಅಂತವರ ಕುರಿತು ಪಠ್ಯ ಅಳವಡಿಸುತ್ತದ್ದರು ವಿನಃ ಸ್ವಾತಂತ್ರ ಹೋರಾಟಕ್ಕೆ ಧುಮುಕಿ ನೇಣಿಗೆ ಶರಣಾದ ಕರಿನೀರಿನ ಶಿಕ್ಷೆಗೆ ಗುರಿಯಾದವರ ಕುರಿತು ತಿಳಿಸುವ ಕಾರ್ಯ ಎಲ್ಲಿಯೂ ನಡೆದಿಲ್ಲವೇಕೆ? ಜನರ ಮನದಲ್ಲಿ ಸುಳ್ಲಿನ ಬೀಜ ಬಿತ್ತಿ ತಪ್ಪು ಭಾವನೆಯ ಬೆಳೆ ಬೆಳೆದಿದ್ದು ಸರಿಯೆ?.
ಸ್ವತಂತ್ರ ಹೋರಾಟ ಚಳುವಳಿ ಎಂಬುದು ನಾಲ್ಕು ಜನರಿಂದ ನಡೆದ ಕಾಲೇಜು ಮುಷ್ಕರವಲ್ಲ ಹಲವಾರು ಜನ ದೇಶಭಕ್ತರಿಂದ ನಡೆದ ಮಹಾಭಾರತವಾದೆ.ಅಲ್ಲಿ ರಾಜ್ಯಬಾರ ಮಾಡಿದವರು ಬ್ರಿಟಿಷರಾದರೆ,ಆಥಿತ್ಯವಹಿಸಿದವರು ಮಂದಗಾಮಿಗಳು, ವನವಾಸ ಮಾಡಿದವರು ಮಾತ್ರ ಕ್ರಾಂತಿಕಾರಿಗಳಾಗಿದ್ದಾರೆ.ಇದರಲ್ಲಿ ವೀರ್ ಸಾವರ್ಕರ್,ಭಗತ್ ಸಿಂಗ್,ಕತರ್ಾರ್ ಸಿಂಗ್,ಸುಭಾಶ್ಚಂದ್ರ ಭೋಸ್, ಹಲವು ಮಹನೀಯರ ದಂಡೆ ಇದೆ. ಲಂಡನ್ನಿಗೆ ಹೋಗಿ ಬ್ಯಾರಿಸ್ಟರ್ ಪದವಿ ಪಡೆದು ಬರಬೇಕಿದ್ದ ಸಾವರ್ಕರ್ ಸ್ವತಂತ್ರ ಗಂಗೆಯ ಒಡಲಿಗೆ ದುಮುಕಿ ಕರಿನೀರಿನ ಶಿಕ್ಷೆಗೆ ಗುರಿಯಾದರು.ವಯಸ್ಸಿಗೆ ಮೀರಿದ ಸಾಧನೆ ಮಾಡುವ ಮೂಲಕ ತನ್ನ ಇಪತ್ಮೂರನೆ ವಯಸ್ಸಿಗೆ ಇಡಿಬ್ರಿಟಿಷ್ ಸಕರ್ಾರಕ್ಕೆ ಸಿಂಹಸ್ವಪನವಾಗಿ ಕಾಡಿದ ನಡು ಕಂಡ ಅಪ್ರತಿಮ ಹೋರಾಟಗಾರ ಭಗತ್ಸಿಂಗ ಕುರಿತದ ಒನದು ಪರಿಚಯದ ಪಾಠವು ಕೂಡ ನಮ್ಮ ಪಠ್ಯದಲ್ಲಿ ಇಲ್ಲಾ.ಯಾಕೆ ಇವರೇನು ದೇಶಭಕ್ತರಲ್ಲವೇ? ದೇಶಕ್ಕಾಗಿ ತಮ್ಮ ಪ್ರಾಣ ಅಪರ್ಿಸಲಿಲ್ಲವೆ? ನೇವೆ ಹೇಳಿ............
ಇನ್ನು ಸ್ವಾತಂತ್ರ ಹೋರಾಟಕ್ಕೆ ಶಾಂತಿ ಮಾರ್ಗಕ್ಕಿಂತ ಕ್ರಾಂತಿಯ ದಾರಿಯೆ ಸರಿಯಾದದ್ದು ಎಂದು ನಂಬಿ ಯುದ್ಧ ಕೈದಿಗಳನ್ನೆಲ್ಲ ಒಂದು ಮಾಡಿ 'ಆಜಾದ್ ಹಿಂದ್ ಫೌಜ್'ನ್ನು ಸ್ಥಪಿಸಿ ಪರಂಗಿಯವರ ಹುಟ್ಟಡಗಿಸಿದ ಸುಭಾಷ್ಚಂದ್ರ ಭೋಸ್ ದೇಶ ಭಕ್ತರಂತೆ ಕಾಣುವುದಿಲ್ಲವೆ? ಬ್ರಿಟಿಷರ ಶೋಷಣೆಯ ವಿರುದ್ಧ ಒಂದು ಹುಲ್ಲು ಕಡ್ಡಿಯನ್ನು ಎತ್ತದ ಹೆಣ್ಣುಬಾಕ ನೆಹರು 'ಇಂಡಿಯನ್ ನ್ಯಾಶಿನಲ್ ಆಮರ್ಿ' ವಿರುದ್ಧವಾಗಿ ನಾನೆ ಕತ್ತಿ ಹಿಡಿದು ಹೋರಾಡುತ್ತೇನೆ ಎಂದು ಬ್ರಿಟಿಷರಿಂದ ಶಹಬಾಷ್ಗಿರಿ ಪಡೆದುಕೊಳ್ಳಲು ಯತ್ನಿಸಿದ ನರಿ ಬುದ್ದಿ ನೆಹರುನನ್ನೇ ದೇಶಭಕ್ತನೆಂದು ಕರೆವಾಗ ಇನ್ನು ದೇಶಕ್ಕಾಗಿ ಪ್ರಾಣ ನೀಡಿದ ಕ್ರೆಆಂತಿಕಾರಿಗಳನ್ನು ಎನೆನ್ನಬೇಕು?
ಕ್ರಾಂತಿಕಾರಿಗಳನ್ನು ಮತ್ತು ಶಾಂತಿಪ್ರಿಯರನ್ನು ತುಲನೆ ಮಾಡಿ ನೋಡಿದರೆ ಇಬ್ಬರಲ್ಲಿ ಯಾವ ವ್ಯತ್ಯಾಸ ಕಾಣಿಸುವುದಿಲ್ಲ. ಇರ್ವರ ಹೋರಾಟದ ದಾರಿಗಳು ಬೇರೆ ಬೇರೆ ಆಗಿದ್ದವು ನಿಜಾ,ಆದರೆಗುರಿ ಮಾತ್ರ ಒಂದೆ ಆಗಿತ್ತಲ್ಲವೆ. ಸಮಾನ ಗುರಿ ಹೋದಿರುವ ಇರ್ವರಲ್ಲಿ ನಾವುಗಳು ಶಾಂತಿ ಪ್ರಿಯರಿಗೆ ಒಂದು ಸ್ಥಾನ ಕ್ರಾಂತಿಕಾಶರಿಗಳಿ ಒಂದು ಸ್ಥಾನ ನೀಡಿರುವುದು ಎಷ್ಟರ ಮಟ್ಟಿಗೆ ಸರಿಎನಿಸುತ್ತದೆ? ನೀವೆ ಯೋಚಿಸಿ. ಪೂವರ್ಾಗ್ರಹ ಪೀಡಿತರಾದ ಎಷ್ಟೋ ಇತಿಹಾಸ ಕಾರರು ಮಾಡಿದ ಪ್ರಮಾದವನ್ನು ನಾವುಗಳು ಕಣ್ಮುಚ್ಚಿ ಸ್ವೀಕರಿಸುತ್ತಿರುವುದು ನಮ್ಮಲ್ಲಿರುವು ದೌರ್ಭಲ್ಯವನ್ನು ಎತ್ತಿ ತೋರಿಸುತ್ತದೆ.
ಶಾಂತಿ ಪ್ರಿಯ ಹೋರಾಟಗಾರರೆಲ್ಲ ಸತ್ತ ನಂತರ ಮಹಾತ್ಮರೆನಿಸಿಕೊಂಡರೆ ಸಾವರ್ಕರ್,ಭಗತ್ಸಿಂಗ್,ಚಂದ್ರಶೆಕರ್ ಆಜಾದ್ ಜನಮಾನಸದಲ್ಲಿ ಮಹಾತ್ಮರಾಗಿ ಅಚ್ಚಳಿಯದಚಿತ್ರಗಳಾಗಿ ಉಳಿದಿದ್ದಾರೆ. ಆದರೆ ನಮ್ಮ ವ್ಯವಸ್ಥೆ ಅದನ್ನು ಬಲವಂತವಾಗಿ ಅಳಿಸಿ ಹಾಕುವ ಪ್ರಯತ್ನ ಮಾಡುತ್ತಿರುವು ವಿಶಾಧನೀಯವಾಗಿದೆ.
ಕ್ರಾಂತಿಕಾರಿಗಳ ಮೇಲಿನ ಸಂಕುಚಿತವಾದ ಭಾವನೆಯನ್ನು ತೊಡೆದು ಹಾಕಿ ವಿಶಾಲವಾದ ನೋಟದಿಂದ ನೋಡಿದರೆ ನಮ್ಮ ದೇಶಕ್ಕಾಗಿ ಆತ್ಮಾರ್ಪಣೆ ಮಾಡಿದ ಅವರು ದೇಶ ಭಕ್ತರಲ್ಲವೇ? ಎನ್ನುವಂತ ಪ್ರಶ್ನೆ ನಿಮಗು ಕೋಡಮೂಡುತ್ತದೆ. ಕೇವಲ ಮಹಾತ್ಮರ ಮದ್ಯದಲ್ಲಿ ಮಹನೀಯರನ್ನು ಮೂಲೆಗುಂಪು ಮಾಡುತ್ತಿರುವುದು ತಪ್ಪು ಎನ್ನುವದರ ಅರಿವಾಗುತ್ತದೆ.ದೇಶಕ್ಕಾಗಿ ಹೋರಾಡಿದ ಮಹಾನ್ ಚೇತನಗಳಲ್ಲಿ ಭೇದಭಾವತೋರದೆ ಸರ್ವರನ್ನು ಸಮಾನರಾಗಿ ಕಾಣಬೇಕು. ನಮ್ಮ ಪಠ್ಯಪುಸ್ತಕದಲ್ಲಿ ಅಡಕವಾಗಿರುವ ಪೂವರ್ಾಗ್ರಹ ಪೀಡೆ ಮತ್ತು ಏಕಮುಖಿ ಭಾವನೆ ದೂರವಾಗಿ ಸ್ವಾತಂತ್ರ ಹೋರಾಟದಲ್ಲಿ ಹುತಾತ್ಮರಾದ ಎಲ್ಲ ದೇಶಪ್ರೇಮಿಗಳ ಕುರಿತು ತಿಳಿಸಿ ಕೊಡುವಕೆಲಸ ನಡೆಯಬೇಕು.ಇದರಿಂದಜನರ ಮನಸಲ್ಲಿ ಏಳುವಂತ ಪ್ರಶೆಗಳ ಸುನಾಮಿ ಶಾಂತವಾಗಭಹುದಾಗಿದೆ.
ನಮ್ಮ ದೇಶಕ್ಕೆ ಸ್ವಾತಂತ್ರ ದೊರಕುವುದಕ್ಕೆ ಒಬ್ಬರ ಪಾತ್ರವಿಲ್ಲ ಶಂತಿ-ಕ್ರಾಂತಿಗಳ ಸಮ್ಮಿಶ್ರಣದಿಂದ ಸ್ವಾತಂತ್ರ ದೊರಿಕಿದೆ ಎಂಬುದಂತು ಸತ್ಯವಾದುದು. ಅದಕ್ಕೆ ಹೇಳುವುದು ಸ್ವತಂತ್ರಗಮಗೆಗೆ ಸಾವಿರ ತೊರೆಗಳು. ಕೇವಲ ಒಂದೆ ಮೂಲದಿಂದ ಸ್ವಾತಂತ್ರ ಬರದೆ ಸಕಲರಿಂದ ದೊರಕಿದ ಸಿಹಿ ಸಜ್ಜಿಗೆಯಾಗಿದೆ. ಇನ್ನು ಮುಂದಾದರು ಮಹಾತ್ಮರ ನಡುವೆ ಹುತಾತ್ಮರಾದ ಕ್ರಾಂತಿಕಾರಿಗಳಿಗು ನ್ಯಾಯ ದೊರೆತರೆ ಭಾರತ ನಾತೆಗೆ ತನ್ನೆರಡು ಮಕ್ಕಳಿಗೆ ಸಮಾನತೆ ಸಿಕ್ಕಿತು ಎಂಬ ಸಂತಸಕ್ಕೆ ಭಾಜನಳಾಗಬಹುದು.

No comments:

Post a Comment